ADVERTISEMENT

ಕೇಜ್ರಿವಾಲ್ ಮುಖಕ್ಕೆ ಖಾರದ ಪುಡಿ ಎರಚಿದ ಅಪರಿಚಿತ ವ್ಯಕ್ತಿ

ಏಜೆನ್ಸೀಸ್
Published 20 ನವೆಂಬರ್ 2018, 12:14 IST
Last Updated 20 ನವೆಂಬರ್ 2018, 12:14 IST
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್   

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮುಖಕ್ಕೆ ಅಪರಿಚಿತವ್ಯಕ್ತಿಯೊಬ್ಬ ಖಾರದ ಪುಡಿ ಎರಚಿದ ಘಟನೆ ನಡೆದಿದೆ.

ಆತನನ್ನು ನರೈನಾ ನಿವಾಸಿ ಅನಿಲ್ ಕುಮಾರ್ ಶರ್ಮಾ ಎಂದು ಗುರುತಿಸಲಾಗಿದ್ದು, ಪೊಲೀಸರು ಈತನನ್ನು ಬಂಧಿಸಿದ್ದಾರೆ.

ಅರವಿಂದ್ ಕೇಜ್ರಿವಾಲ್ ಅವರು ಮಧ್ಯಾಹ್ನ ಸುಮಾರು 2 ಗಂಟೆ ವೇಳೆ ಕಾರ್ಯದರ್ಶಿ ಕಚೇರಿಯಿಂದ ಹೊರಬರುವ ಹೊತ್ತಿಗೆ, ಅನಿಲ್ ಒಂದು ಕೈಯಲ್ಲಿ ಪತ್ರ, ಇನ್ನೊಂದು ಕೈಯಲ್ಲಿ ಖಾರದ ಪುಡಿ ಹಿಡಿದು ನಿಂತಿದ್ದರು.

ADVERTISEMENT

ಕೇಜ್ರಿವಾಲ್ ಬಂದ ಕೂಡಲೇ ಪಾದ ಮುಟ್ಟಿ ನಮಸ್ಕರಿಸಲು ಹೋಗಿದ್ದಾರೆ. ಆಗ ಅದನ್ನು ತಡೆದಾಗ ಮೇಲೆದ್ದ ಆತ, ನೀವೊಬ್ಬರೇ ನಮ್ಮ ಭರವಸೆ ಎಂದು ಕೂಗುತ್ತಾ ಮುಖದ ಮೇಲೆ ಖಾರದ ಪುಡಿ ಎರಚಿದ್ದಾನೆ ಎಂದು ಮೂಲಗಳು ತಿಳಿಸಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.