ADVERTISEMENT

ಪಶ್ಚಿಮ ಬಂಗಾಳ | ರಾಜ್ಯಸಭಾ ಉಪಚುನಾವಣೆ: ರಿತಬ್ರತ ಬ್ಯಾನರ್ಜಿ ಟಿಎಂಸಿ ಅಭ್ಯರ್ಥಿ

ಪಿಟಿಐ
Published 7 ಡಿಸೆಂಬರ್ 2024, 10:32 IST
Last Updated 7 ಡಿಸೆಂಬರ್ 2024, 10:32 IST
<div class="paragraphs"><p>ಟಿಎಂಸಿ </p></div>

ಟಿಎಂಸಿ

   

ಕೊಲ್ಕತ್ತ: ರಾಜ್ಯಸಭಾ ಉಪಚುನಾವಣೆಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷ ರಿತಬ್ರತ ಬ್ಯಾನರ್ಜಿ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ.

ಮುಂಬರುವ ರಾಜ್ಯಸಭಾ ಉಪಚುನಾವಣೆಗೆ ರಿತಬ್ರತ ಬ್ಯಾನರ್ಜಿ ಅವರನ್ನು ಅಭ್ಯರ್ಥಿಯಾಗಿ ಘೋಷಿಸಲು ಸಂತಸವಾಗುತ್ತಿದೆ ಎಂದು ಟಿಎಂಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಹಂಚಿಕೊಂಡಿದೆ.

ADVERTISEMENT

ಆರ್.ಜಿ ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆ ಘಟನೆಗಳ ನಂತರ ರಾಜ್ಯಸಭಾ ಸದಸ್ಯ ಜವ್ಹಾರ್‌ ಸರ್ಕಾರ್‌ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಈ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ. 

ಪಶ್ಚಿಮ ಬಂಗಾಳದಲ್ಲಿ ಖಾಲಿ ಇರುವ ಏಕೈಕ ರಾಜ್ಯಸಭಾ ಸ್ಥಾನಕ್ಕೆ ಡಿಸೆಂಬರ್ 20ರಂದು ಉಪಚುನಾವಣೆ ನಡೆಯಲಿದೆ. ರಿತಬ್ರತ ಬ್ಯಾನರ್ಜಿ ಅವರು ಮೊದಲು ಸಿಪಿಐ (ಎಂ) ಪಕ್ಷದಲ್ಲಿದ್ದರು. 2017ರಲ್ಲಿ ಅವರು ಟಿಎಂಸಿ ಸೇರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.