ADVERTISEMENT

ಬೆಂಗಳೂರು ಮೂಲದ ಪರ್ವತಾರೋಹಿ ಹಿಮಾಚಲ ಪ್ರದೇಶದಲ್ಲಿ ಶವವಾಗಿ ಪತ್ತೆ

ಏಜೆನ್ಸೀಸ್
Published 28 ಆಗಸ್ಟ್ 2018, 12:23 IST
Last Updated 28 ಆಗಸ್ಟ್ 2018, 12:23 IST
ಚಿತ್ರ ಕೃಪೆ: ಫೇಸ್‌ಬುಕ್‌
ಚಿತ್ರ ಕೃಪೆ: ಫೇಸ್‌ಬುಕ್‌   

ಶಿಮ್ಲಾ: ಬೆಂಗಳೂರು ಮೂಲದ ಶಿಖರಾರೋಹಿ ಸತ್ಯನಾರಾಯಣ ಅವರ ಶವ ಹಿಮಾಚಲ ಪ್ರದೇಶದ ಕಿನ್ನೌರ್‌ ಜಿಲ್ಲೆಯ ಭಾಭಾ ಕಣಿವೆಯಲ್ಲಿ ಮಂಗಳವಾರ ಪತ್ತೆಯಾಗಿದೆ.

ರಸ್ತೆ ಅಪಘಾತದಲ್ಲಿ ಸತ್ಯನಾರಾಯಣ (46) ಮೃತಪಟ್ಟಿದ್ದು, ಅವರ ವಾಹನ ಚಾಲಕ ರಮೇಶ್‌ಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಸತ್ಯನಾರಾಯಣ ಅವರು ಹಿಮಾಚಲ ಪ್ರದೇಶದ ವಾಂಗ್ಟುವಿನಿಂದ ಜುಲೈ 25ರಿಂದ ನಾಪತ್ತೆಯಾಗಿದ್ದರು. ಅವರ ಪತ್ತೆಗಾಗಿ ಇಂಡೊ–ಟಿಬೆಟನ್‌ ಗಡಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.