ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ರಾತ್ರಿ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಏನೆಲ್ಲಾ ಮಾಡಬಹುದು ಎಂಬುದನ್ನು ಪ್ರಸ್ತಾಪಿಸಿದರು.
* ಭಾರತೀಯರೆಲ್ಲರೂ ಜಾಗೃತರಾಗಿರಬೇಕು. ಅನಗತ್ಯವಾಗಿ ಮನೆಯಿಂದ ಹೊರಗೆ ಬರಲೇಬಾರದು
* ನಿತ್ಯದ ಆರೋಗ್ಯ ತಪಾಸಣೆಗೆ ಆಸ್ಪತ್ರೆಗೆ ಹೋಗುವುದನ್ನು ತಪ್ಪಿಸಿ. ಶಸ್ತ್ರಚಿಕಿತ್ಸೆ ಮುಂದೂಡಬಹುದಾಗಿದ್ದರೆ ಹಾಗೆಯೇ ಮಾಡಿ
* 60 ವರ್ಷ ದಾಟಿದ ಯಾರೂ ಮನೆಯಿಂದ ಹೊರಗೆ ಬರಬಾರದು
* ಮನೆಗಳಲ್ಲಿ ಕೆಲಸ ಮಾಡುವವರು, ಚಾಲಕರು, ಬೆಂಬಲ ಸಿಬ್ಬಂದಿ, ತೋಟದ ಮಾಲಿ ಮುಂತಾದವರ ಸಂಬಳ ಕಡಿತ ಮಾಡಬೇಡಿ
* ಬೇಕಾದಷ್ಟು ಆಹಾರ ಮತ್ತು ಅಗತ್ಯ ವಸ್ತುಗಳ ಸಂಗ್ರಹ ಇದೆ. ಹಾಗಾಗಿ, ಭಯಬಿದ್ದು ಖರೀದಿ ಮಾಡಲು ಹೋಗಬೇಡಿ. ವದಂತಿಗಳಿಗೆ ಕಿವಿಗೊಡಬೇಡಿ
* ಕೊರೊನಾದಿಂದ ಉಂಟಾಗಿರುವ ಆರ್ಥಿಕ ಹಿನ್ನಡೆ ಸರಿಪಡಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲಾಗುವುದು
ಇತರ ಬೆಳವಣಿಗೆಗಳು
* ಕೊರೊನಾದಿಂದ ಆಗಿರುವ ಬಿಕ್ಕಟ್ಟು ಪರಿಹಾರಕ್ಕೆ ₹20 ಸಾವಿರ ಕೋಟಿಯ ವಿಶೇಷ ಪ್ಯಾಕೇಜನ್ನು ಕೇರಳ ಸರ್ಕಾರ ಘೋಷಿಸಿದೆ
* ಖಾಸಗಿ ಕ್ಷೇತ್ರದಲ್ಲಿ ಅತ್ಯಗತ್ಯ ಮತ್ತು ತುರ್ತು ಸೇವೆಗಳಲ್ಲಿ ಕೆಲಸ ಮಾಡುವವರನ್ನು ಬಿಟ್ಟು ಉಳಿದವರಿಗೆ ಮನೆಯಿಂದ ಕೆಲಸ ಮಾಡಲು ಸೂಚಿಸಬೇಕು ಎಂದು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ
* 10 ವರ್ಷದೊಳಗಿನ ಮಕ್ಕಳು ಮತ್ತು 65 ವರ್ಷಕ್ಕಿಂತ ಹೆಚ್ಚಿನವರು ಮನೆಯಲ್ಲಿಯೇ ಉಳಿಯುವಂತೆ ನಿರ್ದೇಶನ ನೀಡಲು ರಾಜ್ಯಗಳಿಗೆ ಸಲಹೆ
* ಟಿಕೆಟ್ ದರದಲ್ಲಿ ಇದ್ದ ಎಲ್ಲ ರಿಯಾಯಿತಿಗಳನ್ನು ಭಾರತೀಯ ರೈಲ್ವೆಯು ರದ್ದುಪಡಿಸಿದೆ. ರೋಗಿಗಳು, ವಿದ್ಯಾರ್ಥಿಗಳು ಮತ್ತು ಅಂಗವಿಕಲರಿಗೆ ವಿನಾಯಿತಿ ನೀಡಲಾಗಿದೆ. ಇದು ಶುಕ್ರವಾರ ಮಧ್ಯರಾತ್ರಿಯಿಂದ ಜಾರಿ
* ಮುಂಬೈನ ಪ್ರಸಿದ್ಧ ಡಬ್ಬಾವಾಲಾಗಳ ಸೇವೆಯನ್ನು ಶುಕ್ರವಾರದಿಂದ ಇದೇ 31ರವರೆಗೆ ಅಮಾನತು ಮಾಡಲಾಗಿದೆ. ದೆಹಲಿಯ ಸುಂದರ್ನಗರ ಮಾರುಕಟ್ಟೆಯನ್ನು ಇದೇ 31ರವರೆಗೆ ಮುಚ್ಚಲು ನಿರ್ಧರಿಸಲಾಗಿದೆ
* 84 ರೈಲುಗಳನ್ನು ಶುಕ್ರವಾರದಿಂದ ಇದೇ 31ರವರೆಗೆ ರದ್ದು ಮಾಡಲಾಗಿದೆ. ರದ್ದಾದ ರೈಲುಗಳ ಸಂಖ್ಯೆ 155ಕ್ಕೆ ಏರಿದೆ. ಈ ರೈಲುಗಳಲ್ಲಿ ಟಿಕೆಟ್ ಕಾಯ್ದಿರಿಸಿದವರಿಗೆ ಟಿಕೆಟ್ ರದ್ದು ಶುಲ್ಕ ಇಲ್ಲ, ಪೂರ್ಣ ಮೊತ್ತ ವಾಪಸ್ ಸಿಗಲಿದೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.