ADVERTISEMENT

ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದ ಎನ್‌ಐಎ

ಪಿಟಿಐ
Published 12 ಫೆಬ್ರುವರಿ 2023, 15:43 IST
Last Updated 12 ಫೆಬ್ರುವರಿ 2023, 15:43 IST
   

ನವದೆಹಲಿ: ಅಫ್ಗಾನಿಸ್ತಾನಕ್ಕೆ ಪಲಾಯನ ಮಾಡಲು ಯೋಜಿಸಿದ್ದ ಇಬ್ಬರು ಶಂಕಿತ ಭಯೋತ್ಪಾದಕರನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಭಾನುವಾರ ಬಂಧಿಸಿದ್ದಾರೆ. ಬೆಂಗಳೂರಿನ ನಿವಾಸಿ ಮೊಹದ್‌ ಆರಿಫ್‌ ಮತ್ತು ಮಹಾರಾಷ್ಟ್ರದ ಹಮ್‌ರಾಜ್‌ ವರ್ಷಿದ್‌ ಶೇಕ್‌ ಬಂಧಿತರು.

ದೇಶದಲ್ಲಿ ಆಲ್‌-ಖೈದಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಯುವಕರನ್ನು ಪ್ರಜೋದಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನ ಥಣಿಸಂದ್ರ ಮತ್ತು ಮಹಾರಾಷ್ಟ್ರದ ಪಾಲ್ಘರ್-ಥಾಣೆಯಲ್ಲಿ ಶೋಧ ನಡೆಸಿದ ಅಧಿಕಾರಿಗಳು ಇಬ್ಬರನ್ನು ಶನಿವಾರ ವಿಚಾರಣೆಗೆ ಕರೆದೊಯ್ದಿದ್ದರು.

ADVERTISEMENT

ಇವರು ನಿಷೇಧಿತ ಭಯೋತ್ಪಾದಕ ಸಂಘಟನೆಗಳಿಗೆ ಸಂಯೋಜಿತವಾಗಿರುವ ವಿದೇಶಿ ಮೂಲದ ನಿರ್ವಾಹಕರೊಂದಿಗೆ ಆನ್‌ಲೈನ್‌ ಸಂಪರ್ಕ ಹೊಂದಿದ್ದರು ಎಂದು ತನಿಖಾ ಸಂಸ್ಥೆಯ ವಕ್ತಾರರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.