ADVERTISEMENT

ರೈಲ್ವೆಯಲ್ಲಿ ಸುರಕ್ಷತೆಗೆ ಆದ್ಯತೆ; ಒಂದೇ ಒಂದು ಸಾವಿಲ್ಲ: ಪಿಯೂಷ್‌ ಗೋಯಲ್‌

ಕೇಂದ್ರ ರೈಲ್ವೆ ಸಚಿವ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2021, 16:40 IST
Last Updated 12 ಫೆಬ್ರುವರಿ 2021, 16:40 IST
ಪಿಯೂಷ್‌ ಗೋಯಲ್‌
ಪಿಯೂಷ್‌ ಗೋಯಲ್‌   

ನವದೆಹಲಿ: ಸುಮಾರು 22 ತಿಂಗಳಲ್ಲಿ ರೈಲ್ವೆ ಅಪಘಾತದಿಂದ ಒಂದೇ ಒಂದು ಸಾವು ಸಂಭವಿಸಿಲ್ಲ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಶುಕ್ರವಾರ ರಾಜ್ಯಸಭೆಯಲ್ಲಿ ಹೇಳಿದರು.

‘ಆರು ವರ್ಷಗಳಿಂದ ನಾವು ಸುರಕ್ಷತೆಗೆ ಹೆಚ್ಚು ಗಮನ ಕೇಂದ್ರೀಕರಿಸಿದ್ದೇವೆ. 2019ರಲ್ಲಿ ಸಂಭವಿಸಿದ ರೈಲ್ವೆ ಅಪಘಾತದಲ್ಲಿ ಒಬ್ಬ ಪ್ರಯಾಣಿಕ ಸಾವನ್ನಪ್ಪಿದ್ದನ್ನು ಹೊರತುಪಡಿಸಿ, ಈವರೆಗೆ ಯಾವುದೇ ಸಾವು ಸಂಭವಿಸಿಲ್ಲ’ ಎಂದು ಸಚಿವರು ಪ್ರಶ್ನೋತ್ತರ ಅವಧಿಯಲ್ಲಿ ತಿಳಿಸಿದರು.

‘ಸದ್ಯ ಶೇ 70ರಷ್ಟು ಪ್ರಯಾಣಿಕ ರೈಲುಗಳು ಕಾರ್ಯಾಚರಿಸುತ್ತಿವೆ. ಪ್ರಯಾಣಿಕರ ಸುರಕ್ಷತೆಗೆ ನಮ್ಮ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ. ರೈಲ್ವೆ ಸುರಕ್ಷತಾ ಕೆಲಸಗಳಿಗೆ ಹೆಚ್ಚಿನ ಅನುದಾನವನ್ನೂ ವಿನಿಯೋಗಿಸುತ್ತಿದೆ. ಪುನರ್‌ರಚಿತ ರೈಲ್ವೆ ಮಂಡಳಿಯಲ್ಲಿ ಮೊದಲ ಬಾರಿಗೆ ಸುರಕ್ಷತೆಗಾಗಿ ಮಹಾನಿರ್ದೇಶಕರನ್ನು ನೇಮಕ ಮಾಡಲಾಗಿದೆ. ಅವರು ಸುರಕ್ಷತೆಗಾಗಿಯೇ ಸಂಪೂರ್ಣ ಗಮನ ಕೇಂದ್ರೀಕರಿಸಿರುತ್ತಾರೆ’ ಎಂದು ಸಚಿವರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.