ADVERTISEMENT

ಹಿರಿಯ ಕಾಂಗ್ರೆಸ್‌ ನಾಯಕ ಕಾರ್ತಿಕೇಶ್ವರ ಪಾತ್ರ ನಿಧನ

ಪಿಟಿಐ
Published 6 ಅಕ್ಟೋಬರ್ 2020, 7:13 IST
Last Updated 6 ಅಕ್ಟೋಬರ್ 2020, 7:13 IST
ಕಾರ್ತಿಕೇಶ್ವರ ಪಾತ್ರ –ಟ್ವಿಟರ್‌ ಚಿತ್ರ
ಕಾರ್ತಿಕೇಶ್ವರ ಪಾತ್ರ –ಟ್ವಿಟರ್‌ ಚಿತ್ರ   

ಬಾಲಾಸೋರ್(ಒಡಿಶಾ): ಹಿರಿಯ ಕಾಂಗ್ರೆಸ್‌ ನಾಯಕ, ಮಾಜಿ ಸಂಸದ, ಲೇಖಕ ಕಾರ್ತಿಕೇಶ್ವರ ಪಾತ್ರ(79) ಅವರು ಸೋಮವಾರ ರಾತ್ರಿ ನಿಧನರಾದರು.

ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೀಡಾದ್ದ ಅವರನ್ನು ಭುವನೇಶ್ವರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ರಾತ್ರಿ ಕೊನೆ ಉಸಿರೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್ ಮತ್ತು ಇತರ ಗಣ್ಯರು ಪಾತ್ರ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ADVERTISEMENT

ಪಾತ್ರ ಅವರು1971, 1974 ಮತ್ತು1980ರಲ್ಲಿ ಮೂರು ಬಾರಿಭೋಗ್ರೈ ಕ್ಷೇತ್ರದಿಂದ ಒಡಿಶಾ ವಿಧಾನಸಭೆಗೆ ಆಯ್ಕೆಯಾಗಿದ್ದರು. 1991 ರಲ್ಲಿ ಬಾಲಾಸೋರ್ ಕ್ಷೇತದಿಂದ ಲೋಕಸಭೆಗೂ ಆಯ್ಕೆಯಾಗಿದ್ದರು. ಅಲ್ಲದೆ ಅವರು ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದಾರೆ. ಬರಹಗಾರರೂ ಆಗಿದ್ದ ಕಾರ್ತಿಕೇಶ್ವರ ಪಾತ್ರ ಅವರು ಹಲವು ಕೃತಿಗಳನ್ನೂ ರಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.