ADVERTISEMENT

ರ್‍ಯಾಗಿಂಗ್‌: ರಾಜ್ಯಪಾಲರಿಂದ ಜಾದವ್‌ಪುರ ವಿ.ವಿ ಪರಿಸ್ಥಿತಿ ಪರಾಮರ್ಶೆ

ಪಿಟಿಐ
Published 24 ಆಗಸ್ಟ್ 2023, 16:26 IST
Last Updated 24 ಆಗಸ್ಟ್ 2023, 16:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋಲ್ಕತ್ತ: ರ್‍ಯಾಗಿಂಗ್‌ ಮತ್ತು ಲೈಂಗಿಕ ಕಿರುಕುಳಕ್ಕೆ ಜಾದವ್‌ಪುರ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯೊಬ್ಬರು ಬಲಿಯಾದ ಹಿನ್ನೆಲೆಯಲ್ಲಿ, ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ ಆನಂದ ಬೋಸ್‌ ಗುರುವಾರ ತುರ್ತಾಗಿ ಪರಿಸ್ಥಿತಿ ಅವಲೋಕನ ಸಭೆ ನಡೆಸಿದರು. ಈ ಸಭೆಗೆ ವಿವಿಯ ನೂತನ ಉಪ ಕುಲಪತಿ ಬುದ್ಧದೇಬ್‌ ಸೌ ಹಾಜರಾದರು.    

ರಾಜಭವನದಲ್ಲಿ ನಿಗದಿಯಾಗಿದ್ದ ಸಭೆಯಲ್ಲಿ ಬುದ್ಧದೇಬ್‌ ಅವರು ವಿಶ್ವವಿದ್ಯಾಲಯದ ಕಾರ್ಯನಿರ್ವಹಣೆ ಕುರಿತು ವಿವರಿಸಿದ್ದಾರೆ. 

ಸಹಪಾಠಿಗಳ ಕಿರುಕುಳ, ಲೈಂಗಿಕ ದೌರ್ಜನ್ಯದಿಂದ ಬೇಸತ್ತ 17 ವರ್ಷದ ಪದವಿ ಪೂರ್ವ ವಿದ್ಯಾರ್ಥಿಯೊಬ್ಬರು ಈ ತಿಂಗಳ 9ರಂದು ವಿ.ವಿಯ ಬಾಲಕರ ಹಾಸ್ಟೆಲ್‌ನ ಎರಡನೇ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದರು.  

ADVERTISEMENT

ಸಂತ್ರಸ್ತ ವಿದ್ಯಾರ್ಥಿಯ ಬಟ್ಟೆ ಕಳಚಿ ಹಾಸ್ಟೆಲ್‌ ಅವರಣದಲ್ಲಿ ಮೆರವಣಿಗೆ ಮಾಡಲಾಗಿತ್ತು. ಕಿರುಕುಳ ತಪ್ಪಿಸಿಕೊಳ್ಳಲು ವಿದ್ಯಾರ್ಥಿಯು ಕೊಠಡಿಯಿಂದ ಕೊಠಡಿಗೆ ಅಡ್ಡಾಡಿದ್ದರು ಎಂದು ಪೊಲೀಸ್‌ ತನಿಖೆ ವೇಳೆ ಗೊತ್ತಾಗಿದೆ ಎನ್ನಲಾಗಿದೆ. ಈ ಪ್ರಕರಣ ರ್‍ಯಾಗಿಂಗ್‌ ಪಿಡುಗಿನ ಕುರಿತು ಪಶ್ಚಿಮ ಬಂಗಾಳದಲ್ಲಿ ಭಾರಿ ಚರ್ಚೆ ಹುಟ್ಟು ಹಾಕಿದೆ.  

‌ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಯ ವಿದ್ಯಾರ್ಥಿಗಳು, ಹಳೇ ವಿದ್ಯಾರ್ಥಿಗಳೂ ಸೇರಿ 13 ಮಂದಿಯನ್ನು ಬಂಧಿಸಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.