ADVERTISEMENT

‘ಒಂದು ದೇಶ, ಒಂದು ಪಡಿತರ’ ಜೂನ್‌ನಿಂದ ರಾಷ್ಟ್ರವ್ಯಾಪಿ ಜಾರಿ: ಸಚಿವ ರಾಮವಿಲಾಸ್‌

ಕೇಂದ್ರ ಸಚಿವ ಹೇಳಿಕೆ

ಪಿಟಿಐ
Published 3 ಡಿಸೆಂಬರ್ 2019, 18:30 IST
Last Updated 3 ಡಿಸೆಂಬರ್ 2019, 18:30 IST
ರಾಮವಿಲಾಸ್‌ ಪಾಸ್ವಾನ್‌
ರಾಮವಿಲಾಸ್‌ ಪಾಸ್ವಾನ್‌   

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಒನ್‌ ನೇಷನ್‌ ಒನ್‌ ರೇಷನ್‌ ಕಾರ್ಡ್‌’ (ಒಂದು ದೇಶ ಒಂದು ಪಡಿತರ) ಯೋಜನೆ ಬರುವ ಜೂನ್‌ನಿಂದ ದೇಶದಾದ್ಯಂತ ಜಾರಿಗೆ ಬರಲಿದೆ ಎಂದು ಕೇಂದ್ರ ಆಹಾರ ಸಚಿವ ರಾಮವಿಲಾಸ್‌ ಪಾಸ್ವಾನ್‌ ಲೋಕಸಭೆಯಲ್ಲಿ ಮಂಗಳವಾರ ಹೇಳಿದ್ದಾರೆ.

ಬೇರೆ ಬೇರೆ ರಾಜ್ಯಗಳಿಗೆ ವಲಸೆ ಹೋಗುವ ಕೂಲಿಕಾರ್ಮಿಕರು ಒಂದೇ ಪಡಿತರ ಕಾರ್ಡ್‌ ಬಳಸಿ ಯಾವುದೇ ರಾಜ್ಯದ ನ್ಯಾಯಬೆಲೆ ಅಂಗಡಿಯಲ್ಲಿ ಆಹಾರ ಧಾನ್ಯ ಪಡೆಯಬಹುದಾಗಿದೆ.

‘ಇದೇ ಮಾದರಿಯಲ್ಲಿ ಒಂದು ದೇಶ ಒಂದು ಮಾನಕ (ಒನ್‌ ನೇಷನ್‌, ಒನ್‌ ಸ್ಟ್ಯಾಂಡರ್ಡ್‌) ಎಂಬ ಯೋಜನೆಯನ್ನು ಸಹ ಜಾರಿಗೆ ತರಲು ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಈ ಯೋಜನೆಯ ರೂಪುರೇಷೆಗಳನ್ನು ಸಿದ್ಧಪಡಿಸುವಂತೆ ಬ್ಯೂರೊ ಆಫ್‌ ಇಂಡಿಯನ್‌ ಸ್ಟ್ಯಾಂಡರ್ಡ್ಸ್‌ಗೆ (ಬಿಐಎಸ್‌) ಸೂಚನೆ ನೀಡಲಾಗಿದೆ’ ಎಂದೂ ಪಾಸ್ವಾನ್‌ ಸದನಕ್ಕೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.