ಭಾರತದ ದಾಳಿಗೆ ಭಯೋತ್ಪಾದಕರ ಶಿಬಿರಗಳು ಧ್ವಂಸಗೊಂಡಿವೆ –ಪಿಟಿಐ ಚಿತ್ರ
ನವದೆಹಲಿ: ಭಾರತ ನಡೆಸಿದ ಆಪರೇಷನ್ ಸಿಂಧೂರ ದಾಳಿಯಲ್ಲಿ ಸತ್ತ 5 ಭಯೋತ್ಪಾದಕರ ಗುರುತು ಪತ್ತೆಯಾಗಿದ್ದು ಅವರ ಅಂತ್ಯಸಂಸ್ಕಾರದಲ್ಲಿ ಪಾಕಿಸ್ತಾನದ ಸರ್ಕಾರಿ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ವರದಿಯಾಗಿದೆ.
ಮೇ 7ರಂದು ಭಾರತ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ನಿಷೇಧಿತ ಉಗ್ರಗಾಮಿ ಸಂಘಟನೆಗಳಾದ ಜೈಷ್–ಎ–ಮೊಹಮ್ಮದ್, ಲಷ್ಕರ್-ಎ-ತಯಬಾಗೆ ಸೇರಿದ ಐವರು ಉಗ್ರರು ಹತರಾಗಿದ್ದಾರೆ.
1. ಮುದಸ್ಸರ್ ಖಾಡಿಯನ್ ಖಾಸ್ ಅಲಿಯಾಸ್ ಮುದಸ್ಸರ್ ಅಲಿಯಾಸ್ ಅಬು ಜುಂದಾಲ್
ಸಂಘಟನೆ: ಲಷ್ಕರ್–ಎ–ತಯಬಾ(ಎಲ್ಇಟಿ)
* ಮುರಿದ್ಕೆಯಲ್ಲಿ ‘ಮರ್ಕಜ್ ತಯಬಾ’ದ ಉಸ್ತುವಾರಿ
* ಅಂತ್ಯಕ್ರಿಯೆ ವೇಳೆ ಆತನಿಗೆ ಪಾಕಿಸ್ತಾನ ಸೇನೆಯಿಂದ ಸರ್ಕಾರಿ ಗೌರವ ಸಮರ್ಪಣೆ
* ಜಾಗತಿಕ ಉಗ್ರ ಹಫೀಜ್ ಅಬ್ದುಲ್ ರೌಫ್ ನೇತೃತ್ವದಲ್ಲಿ ಸರ್ಕಾರಿ ಶಾಲೆಯಲ್ಲಿ ಮುದಸ್ಸರ್ ಅಂತಿಮ ನಮನ ಕಾರ್ಯಕ್ರಮ
* ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಮತ್ತು ಪಂಜಾಬ್ ಮುಖ್ಯಮಂತ್ರಿ ಮರಿಯಂ ನವಾಜ್ ಪರವಾಗಿ ಪುಷ್ಪಾರ್ಚನೆ
* ಅಂತ್ಯಕ್ರಿಯೆಯಲ್ಲಿ ಪಾಕ್ ಸೇನೆಯ ಲೆಫ್ಟಿನೆಂಟ್ ಜನರಲ್ ಮತ್ತು ಪಂಜಾಬ್ ಐಜಿಪಿ ಭಾಗಿ
2. ಹಫೀಜ್ ಮೊಹಮ್ಮದ್ ಜಮೀಲ್
ಸಂಘಟನೆ: ಜೈಷ್–ಎ–ಮೊಹಮ್ಮದ್ (ಜೆಇಎಂ)
* ಜೆಇಎಂ ಸಂಸ್ಥಾಪಕ, ಜಾಗತಿಕ ಉಗ್ರ ಮೌಲಾನಾ ಮಸೂದ್ ಅಜರ್ನ ಹಿರಿಯ ಬಾಮೈದ
* ಭಹವಾಲ್ಪುರದಲ್ಲಿ ‘ಮರ್ಕಜ್ ತಯಬಾ’ದ ಉಸ್ತುವಾರಿ
* ಜೆಇಎಂಗೆ ಹಣ ಸಂಗ್ರಹಣೆ ಮಾಡುತ್ತಿದ್ದ ಮತ್ತು ಸಂಘಟನೆಗೆ ಸೇರಲು ಯುವಕರನ್ನು ಪ್ರೇರೇಪಿಸುತ್ತಿದ್ದ
3. ಮೊಹಮ್ಮದ್ ಯೂಸುಫ್ ಅಜರ್ ಅಲಿಯಾಸ್ ಉಸ್ತಾದ್ ಜಿ ಅಲಿಯಾಸ್ ಮೊಹದ್ ಸಲೀಮ್ ಅಲಿಯಾಸ್ ಘೋಸಿ ಸಾಹಬ್
ಸಂಘಟನೆ: ಜೈಷ್–ಎ–ಮೊಹಮ್ಮದ್ (ಜೆಇಎಂ)
* ಮೌಲಾನಾ ಮಸೂದ್ ಅಜರ್ನ ಕಿರಿಯ ಬಾಮೈದ
* ಜಮ್ಮು–ಕಾಶ್ಮೀರದ ಹಲವು ಭಯೋತ್ಪಾದಕ ದಾಳಿಗಳಲ್ಲಿ ಭಾಗಿ
* 1999ರಲ್ಲಿ ನಡೆದಿದ್ದ ಐಸಿ–814 ವಿಮಾನ ಅಪಹರಣ ಪ್ರಕರಣದಲ್ಲಿ ಭಾರತಕ್ಕೆ ಬೇಕಾಗಿದ್ದ ಭಯೋತ್ಪಾದಕ
* ಜೆಇಎಂನಲ್ಲಿ ಶಸ್ತ್ರಾಸ್ತ್ರ ತರಬೇತುದಾರ
4. ಖಲೀದ್ ಅಲಿಯಾಸ್ ಅಬು ಅಕಾಶಾ
ಸಂಘಟನೆ: ಲಷ್ಕರ್–ಎ–ತಯಬಾ(ಎಲ್ಇಟಿ)
* ಜಮ್ಮು–ಕಾಶ್ಮೀರದ ಹಲವು ಭಯೋತ್ಪಾದಕ ದಾಳಿಗಳಲ್ಲಿ ಭಾಗಿ
* ಅಫ್ಗಾನಿಸ್ತಾನದಿಂದ ಶಸ್ತ್ರಾಸ್ತ್ರ ಸಾಗಣೆ ಮಾಡುತ್ತಿದ್ದ ಖಲೀದ್
* ಫೈಸಲಾಬಾದ್ನಲ್ಲಿ ನಡೆದ ಖಲೀದ್ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನ ಸೇನೆಯ ಹಿರಿಯ ಅಧಿಕಾರಿಗಳು ಮತ್ತು ಅಲ್ಲಿನ ಜಿಲ್ಲಾಧಿಕಾರಿ ಭಾಗಿ
5. ಮೊಹಮ್ಮದ್ ಹಸಾನ್ ಖಾನ್
ಸಂಘಟನೆ: ಜೈಷ್–ಎ–ಮೊಹಮ್ಮದ್ (ಜೆಇಎಂ)
* ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಜೆಇಎಂನ ಆಪರೇಷನಲ್ ಕಮಾಂಡರ್ ಮುಫ್ತಿ ಅಸ್ಗರ್ ಖಾನ್ ಕಾಶ್ಮೀರಿಯ ಪುತ್ರ
* ಜಮ್ಮು–ಕಾಶ್ಮೀರದ ಹಲವು ಭಯೋತ್ಪಾದಕ ದಾಳಿಗಳನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.