ADVERTISEMENT

ಸ್ಪೈಸ್‌ಜೆಟ್‌ ತಲ್ಲಣ ಪ್ರಕರಣ: ಪ್ರಯಾಣಿಕ ಸಾವು

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2022, 21:30 IST
Last Updated 29 ಅಕ್ಟೋಬರ್ 2022, 21:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಈ ವರ್ಷದ ಮೇ 1ರಂದು ಮುಂಬೈ– ದುರ್ಗಾಪುರ ನಡುವೆ ಸಂಚರಿಸುತ್ತಿದ್ದ ಸ್ಪೈಸ್‌ ಜೆಟ್‌ ವಿಮಾನ ಇಳಿಯುವ ವೇಳೆ ಗಾಳಿಯ ಒತ್ತಡಕ್ಕೆ ಸಿಲುಕಿ ಅಲುಗಾಡಿದ್ದ ಸಂದರ್ಭದಲ್ಲಿ ತೀವ್ರ ಗಾಯಗೊಂಡಿದ್ದ ಅಕ್ಬರ್‌ ಅನ್ಸಾರಿ (48) ಎಂಬುವವರು ಕಳೆದ ತಿಂಗಳು ಮೃತಪಟ್ಟಿದ್ದಾರೆಎಂದು ವಿಮಾನಯಾನ ಸಂಸ್ಥೆತಿಳಿಸಿದೆ.

ಅನ್ಸಾರಿ ಅವರು ಸೆಪ್ಟೆಂಬರ್‌ 26ರಂದು ಮೃತಪಟ್ಟಿದ್ದು ಅದಕ್ಕೂ ಮುನ್ನ ಒಂದು ತಿಂಗಳು ಅವರು ವೆಂಟಿಲೇಟರ್‌ನಲ್ಲಿದ್ದರು ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ವಿಮಾನ ಇಳಿಯುವ ವೇಳೆ ತಲ್ಲಣದ ಸ್ಥಿತಿ ಉಂಟಾದ್ದರಿಂದ ಮೂವರು ಕ್ಯಾಬಿನ್‌ ಸಿಬ್ಬಂದಿ ಸೇರಿ 14 ಪ್ರಯಾಣಿಕರು ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.