ADVERTISEMENT

ದೇಶ ವಿಭಜನೆ ವೇಳೆ ಮೃತಪಟ್ಟವರಿಗೆ ಪ್ರಧಾನಿ ನರೇಂದ್ರ ಮೋದಿ ನಮನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಆಗಸ್ಟ್ 2023, 5:44 IST
Last Updated 14 ಆಗಸ್ಟ್ 2023, 5:44 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   ಪಿಟಿಐ

ನವದೆಹಲಿ: ದೇಶ ವಿಭಜನೆ ವೇಳೆ ಜನರು ಅನುಭವಿಸಿದ ನೋವು ಹಾಗೂ ಆ ವೇಳೆ ಮೃತರಾದವರಿಗೆ ಸೋಮವಾರ ‘ದೇಶ ವಿಭಜನೆಯ ಭಯಾನಕ ನೆನಪಿನ ದಿನ’ದಂದು ಪ್ರಧಾನಿ ನರೇಂದ್ರ ಮೋದಿ ಅವರು ಗೌರವ ಸಲ್ಲಿಸಿದರು.

ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

’ದೇಶ ವಿಭಜನೆ ವೇಳೆ ಜೀವ ಕಳೆದುಕೊಂಡ ಭಾರತೀಯರನ್ನು ಪೂಜ್ಯಭಾವದಿಂದ ನೆನಪಿಸುವ ದಿನವೇ ವಿಭಜನೆಯ ಸಂಸ್ಮರಣಾ ದಿನ. ಬಲವಂತವಾಗಿ ವಲಸೆ ಹೋದವರ ದು:ಖ ಹಾಗೂ ಕಷ್ಟವನ್ನು ಸ್ಮರಿಸುವ ದಿನ. ಅಂತಹ ಎಲ್ಲರಿಗೂ ನಾನು ನಮಸ್ಕರಿಸುತ್ತೇನೆ’ ಎಂದು ಅವರು ಬರೆದುಕೊಂಡಿದ್ದಾರೆ.

ADVERTISEMENT

2021ರಿಂದ ಆಗಸ್ಟ್‌ 14 ಅನ್ನು ದೇಶ ವಿಭಜನೆಯ ಭಯಾನಕ ನೆನಪಿನ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.