ಬೆಂಗಳೂರು:ಸಿದ್ದಗಂಗಾ ಮಠದ ಶಿವಮಾರ ಸ್ವಾಮೀಜಿ ಅವರ ಅಂತಿಮ ದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ ಯಾಕೆ ಬರಲಿಲ್ಲ? ಎಂಬುದು ಜನರ ಪ್ರಶ್ನೆ.ದೇಶದಲ್ಲಿ ಯಾವುದಾದರೂ ರಾಜಕಾರಣಿಗಳುನಿಧನರಾದಾಗ ಅಲ್ಲಿಗೆ ದೌಡಾಯಿಸುತ್ತಿದ್ದ ಮೋದಿ, ನಡೆದಾಡುವ ದೇವರ ಅಂತಿಮ ದರ್ಶನ ಪಡೆಯಲು ಯಾಕೆ ಬಂದಿಲ್ಲ? ಎಂದು ನೆಟಿಜನ್ಗಳು ಪ್ರಶ್ನಿಸುತ್ತಿದ್ದಾರೆ.
ಮೋದಿ ಬಂದಿಲ್ಲ ಯಾಕೆ?
ಈ ಹಿಂದಿನ ನಿರ್ಧಾರದಂತೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಬೆಳಗ್ಗೆ ತುಮಕೂರಿಗೆ ಆಗಮಿಸಬೇಕಾಗಿತ್ತು. ಆದರೆ ಶಿವಕುಮಾರ ಸ್ವಾಮೀಜಿಯವರ ಅಂತಿಮ ದರ್ಶನಕ್ಕಾಗಿ ಲಕ್ಷೋಪಲಕ್ಷ ಮಂದಿ ಆಗಮಿಸುತ್ತಿದ್ದು ಅಲ್ಲಿ ಮೋದಿಗಾಗಿ ವಿಶೇಷ ಸುರಕ್ಷಾ ವ್ಯವಸ್ಥೆ ಏರ್ಪಡಿಸುವುದು ಕಷ್ಟ ಎಂಬ ಕಾರಣದಿಂದಾಗಿ ಮೋದಿ ಬರಲಿಲ್ಲ ಎಂದು ಏಷ್ಯಾನೆಟ್ ನ್ಯೂಸ್ ವರದಿ ಮಾಡಿದೆ.
ಭದ್ರತೆ ಕಾರಣದಿಂದ ಮೋದಿ ತುಮಕೂರಿಗೆ ಬಂದಿಲ್ಲ. ಆದರೆ ಅವರು ಸರಣಿ ಟ್ವೀಟ್ಗಳ ಮೂಲಕ ಸ್ವಾಮೀಜಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.