ADVERTISEMENT

ಪುರಿ ಜಗನ್ನಾಥ ದೇಗುಲ ಹತ್ತಲು ಯತ್ನಿಸಿದ ಜಾರ್ಖಂಡ್‌ನ ವ್ಯಕ್ತಿ ಬಂಧನ

ಪಿಟಿಐ
Published 16 ಆಗಸ್ಟ್ 2025, 14:16 IST
Last Updated 16 ಆಗಸ್ಟ್ 2025, 14:16 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಪುರಿ: ಪುರಿ ಶ್ರೀ ಜಗನ್ನಾಥ ದೇಗುಲವನ್ನು ಶನಿವಾರ ಹತ್ತಲು ಪ್ರಯತ್ನಿಸುತ್ತಿದ್ದ ಜಾರ್ಖಂಡ್‌ನ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ADVERTISEMENT

ಬಂಧಿತನನ್ನು ರಾಂಚಿಯ ಪಂಚಮ ಮಾಹೋತ್ ಎಂದು ಗುರುತಿಸಲಾಗಿದೆ. ಈತ ದೇವಾಲಯದ ಸುಮಾರು 5–7 ಅಡಿಗಳಷ್ಟು ಮೇಲಕ್ಕೆ ಏರಿದ್ದನು. ವಿಷಯ ತಿಳಿಯುತ್ತಿದ್ದಂತೆ ಶ್ರೀ ಜಗನ್ನಾಥ ದೇಗುಲದ ಪೊಲೀಸರು ಆತನನ್ನು ತಡೆದಿದ್ದಾರೆ.

ಪ್ರಸ್ತುತ ಸಿಂಹದ್ವಾರ ಪೊಲೀಸ್‌ ಠಾಣೆಯಲ್ಲಿ ಆತನ ವಿಚಾರಣೆ ನಡೆಯುತ್ತಿದೆ. ಆತ ಮಾನಸಿಕ ಅಸ್ವಸ್ಥ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.