ADVERTISEMENT

ರಾಜ್, ಉದ್ಧವ್ ಒಗ್ಗಟ್ಟಿನಿಂದ ‘ಮಹಾಯುತಿ’ ಪಾಳಯದಲ್ಲಿ ನಡುಕ: ಸಂಜಯ್‌ ರಾವುತ್‌

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 0:52 IST
Last Updated 7 ಜುಲೈ 2025, 0:52 IST
<div class="paragraphs"><p>ಸಂಜಯ್‌ ರಾವುತ್‌</p></div>

ಸಂಜಯ್‌ ರಾವುತ್‌

   

ಮುಂಬೈ: ‘ಎಂಎನ್‌ಎಸ್‌ ಮುಖ್ಯಸ್ಥ ರಾಜ್‌ ಠಾಕ್ರೆ ಮತ್ತು ಶಿವಸೇನಾ (ಉದ್ಧವ್‌ ಬಣ) ಉದ್ಧವ್‌ ಠಾಕ್ರೆ ಅವರು ಒಂದುಗೂಡಿರುವುದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಸೇರಿದಂತೆ ಇಡೀ ‘ಮಹಾಯುತಿ’ ಪಾಳಯದಲ್ಲಿ ನಡುಕ ಹುಟ್ಟಿಸಿದೆ’ ಎಂದು ಶಿನಸೇವಾ (ಉದ್ಧವ್‌ ಬಣ) ಸಂಸದ ಸಂಜಯ್‌ ರಾವುತ್ ಹೇಳಿದರು.

‘ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಹಿಂದಿ ಭಾಷೆ ಕಲಿಸುವ ಸಂಬಂಧ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿದ್ದರ ಕುರಿತು ಇಬ್ಬರೂ ಸಹೋದರರು ಆಯೋಜಿಸಿದ್ದ ‘ವಿಜಯ’ ರ್‍ಯಾಲಿಯು ‘ಮಹಾಯುತಿ’ ನಾಯಕರಿಗೆ ದಿಕ್ಕು ತೋಚದಂತೆ ಮಾಡಿದೆ’ ಎಂದು ಪತ್ರಕರ್ತರಿಗೆ ಭಾನುವಾರ ಪ್ರತಿಕ್ರಿಯಿಸಿದರು. 

ADVERTISEMENT

‘ಫಡಣವೀಸ್‌ ಮತ್ತು ಉಪಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಈಗ ಅಳುವ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.