ADVERTISEMENT

ರಫೇಲ್: ಮರುಪರಿಶೀಲನೆ ಅರ್ಜಿ ಕಾಯ್ದಿರಿಸಿದ ಸುಪ್ರೀಂ

ಮೊದಲು ಕೇಂದ್ರದ ಆಕ್ಷೇಪ ಇತ್ಯರ್ಥ

ಪಿಟಿಐ
Published 14 ಮಾರ್ಚ್ 2019, 20:03 IST
Last Updated 14 ಮಾರ್ಚ್ 2019, 20:03 IST
ಇತ್ತಿಚಿನ ಏರೊ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ರಫೇಲ್ ಯುದ್ಧವಿಮಾನ –ಪ್ರಜಾವಾಣಿ ಚಿತ್ರ-Photo/ANAND BAKSHI
ಇತ್ತಿಚಿನ ಏರೊ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ರಫೇಲ್ ಯುದ್ಧವಿಮಾನ –ಪ್ರಜಾವಾಣಿ ಚಿತ್ರ-Photo/ANAND BAKSHI   

ನವದೆಹಲಿ: ರಫೇಲ್ ಯುದ್ಧವಿಮಾನ ಒಪ್ಪಂದ ಪ್ರಕರಣದ ತೀರ್ಪಿನ ಮರುಪರಿಶೀಲನೆ ಅರ್ಜಿಯನ್ನು ಕಾಯ್ದಿರಿಸಿದ ಸುಪ್ರೀಂ ಕೋರ್ಟ್,ಕೇಂದ್ರ ಸರ್ಕಾರ ಸಲ್ಲಿಸಿರುವ ಆಕ್ಷೇಪಗಳನ್ನು ಮೊದಲಿಗೆ ಇತ್ಯರ್ಥಗೊಳಿಸಲಾಗುವುದುಎಂದು ಹೇಳಿದೆ.

‘ತೀರ್ಪು ಮರುಪರಿಶೀಲನಾ ಅರ್ಜಿ ಜತೆಗೆ ಸಲ್ಲಿಸಿರುವ ದಾಖಲೆಗಳನ್ನು ಅರ್ಜಿದಾರರು ಅಕ್ರಮವಾಗಿ ಪಡೆದುಕೊಂಡಿದ್ದಾರೆ. ಆದ್ದರಿಂದ ಅರ್ಜಿ ಜತೆಗೆ ಇವುಗಳನ್ನು ಪರಿಗಣಿಸಲಾಗದು’ ಎಂದು ಕೇಂದ್ರ ಸರ್ಕಾರದ ಪರ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರು ಗುರುವಾರ ನ್ಯಾಯಾಲಯಕ್ಕೆ ತಿಳಿಸಿದರು. ದೇಶದ ಭದ್ರತೆಗೆ ಸಂಬಂಧಿಸಿರುವುದರಿಂದಾಗಿ, ಸಂಬಂಧಪಟ್ಟ ಇಲಾಖೆಯ ಅನುಮತಿ ಇಲ್ಲದೆಈ ಗೋಪ್ಯ ದಾಖಲೆಗಳನ್ನು ಯಾರೂ ಬಹಿರಂಗಗೊಳಿಸುವಂತಿಲ್ಲ ಎಂದು ನ್ಯಾಯಪೀಠಕ್ಕೆ ವೇಣುಗೋಪಾಲ್ ತಿಳಿಸಿದರು.

ಅರ್ಜಿದಾರರಲ್ಲಿ ಒಬ್ಬರಾದ ವಕೀಲ ಪ್ರಶಾಂತ್ ಭೂಷಣ್ ಅವರುಇದಕ್ಕೆ ವಿರೋಧ ವ್ಯಕ್ತಪಡಿಸಿ, ‘ರಫೇಲ್ ಒಪ್ಪಂದಕ್ಕೆ ಸಂಬಂಧಪಟ್ಟ ದಾಖಲೆಗಳು ಗೋಪ್ಯವಾಗಿಲ್ಲ.ಈಗಾಗಲೇ ಸಾರ್ವಜನಿಕವಾಗಿ ಲಭ್ಯವಾಗಿದೆ’ ಎಂದರು.

ADVERTISEMENT

ವಿಚಾರಣೆ ಆಲಿಸಿದಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ನ್ಯಾಯಪೀಠ, ಈ ಸಂಬಂಧದ ನಿರ್ಣಯವನ್ನು ಕಾಯ್ದಿರಿಸಿತು.

‘ಕೇಂದ್ರ ಸರ್ಕಾರ ಸಲ್ಲಿಸಿರುವ ಆಕ್ಷೇಪಗಳ ಕುರಿತು ಮೊದಲು ಗಮನಹರಿಸಿ’ ಎಂದುನ್ಯಾಯಮೂರ್ತಿಗಳಾದ ಎಸ್‌.ಕೆ. ಕೌಲ್‌ ಹಾಗೂ ಕೆ.ಎಂ. ಜೋಸೆಫ್ ಅವರನ್ನೂ ಒಳಗೊಂಡ ಪೀಠ ಅರ್ಜಿದಾರರಿಗೆ ಸೂಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.