ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅವರು ರಾಜಕೀಯ ಪ್ರವೇಶ ಮಾಡುವುದಿಲ್ಲ ಎಂದು ಘೋಷಿಸಿದ ಪರಿಣಾಮ, ಅವರು ಸ್ಥಾಪಿಸಿದ ‘ರಜನಿ ಮಕ್ಕಳ್ ಮಂದ್ರಂ’ನ ಪದಾಧಿಕಾರಿಗಳು ಸಂಘಟನೆಯನ್ನು ತೊರೆಯಲಾರಂಭಿಸಿದ್ದಾರೆ.
ಸಂಘಟನೆಯ ಮೂರು ಜಿಲ್ಲಾ ಘಟಕಗಳ ಕಾರ್ಯದರ್ಶಿಗಳು ಭಾನುವಾರ ಪಕ್ಷದ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಸಮ್ಮುಖದಲ್ಲಿ ಡಿಎಂಕೆ ಸೇರ್ಪಡೆಯಾದರು.
ಸಂಘಟನೆಯ ಜಿಲ್ಲಾ ಕಾರ್ಯದರ್ಶಿಗಳಾದ ಎ.ಜೋಸೆಫ್ ಸ್ಟಾಲಿನ್ (ತೂತ್ತುಕುಡಿ), ಕೆ.ಸೆಂಥಿಲ್ ಸೆಲ್ವಾನಂದ (ರಾಮನಾಥಪುರಂ ಹಾಗೂ ಆರ್.ಗಣೇಶನ್ (ಥೇಣಿ) ಡಿಎಂಕೆ ಸೇರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.