ADVERTISEMENT

ವಿಮಾನಗಳ ಹಾರಾಟದಲ್ಲಿ ವ್ಯತ್ಯಯ: 3 ಬಾರಿ ಮಂಜಿನ ಮಾಹಿತಿ ರವಾನೆಗೆ ಸಿಂಧಿಯಾ ಸೂಚನೆ

ಪಿಟಿಐ
Published 16 ಜನವರಿ 2024, 12:53 IST
Last Updated 16 ಜನವರಿ 2024, 12:53 IST
<div class="paragraphs"><p>ವಿಮಾನ ನಿಲ್ದಾಣದಲ್ಲಿ ಕವಿದ ಮಂಜು</p></div>

ವಿಮಾನ ನಿಲ್ದಾಣದಲ್ಲಿ ಕವಿದ ಮಂಜು

   

ನವದೆಹಲಿ: ಉತ್ತರ ಭಾರತದ ಬಹುತೇಕ ಭಾಗಗಳಲ್ಲಿ ದಟ್ಟ ಮಂಜು ಕವಿದ ಕಾರಣ ವಿಮಾನ ಹಾರಾಟಕ್ಕೆ ಎದುರಾಗಿರುವ ಸಮಸ್ಯೆಯನ್ನು ಪರಿಹರಿಸಲು ವಿಮಾನಯಾನ ಸಚಿವಾಲಯ ಮುಂದಾಗಿದೆ.

ಇದಕ್ಕೆ ಸಂಬಂಧಿಸಿದಂತೆ ದಿನದಲ್ಲಿ ಮೂರು ಬಾರಿ ಮಂಜು ಕವಿದ ವಾತಾವರಣದ ಮಾಹಿತಿ ನೀಡುವಂತೆ ದೆಹಲಿ, ಮುಂಬೈ ಸೇರಿದಂತೆ ದೇಶದ ಇತರ ನಾಲ್ಕು ಮಹಾನಗರಗಳ ವಿಮಾನ ನಿಲ್ದಾಣಗಳಿಗೆ ಸೂಚನೆ ನೀಡಿದೆ. 

ADVERTISEMENT

ಮಂಜು ಕವಿದ ವಾತಾವರಣ ಕುರಿತು ನಿಗಾ ವಹಿಸಲು ಮತ್ತು ಮಾಹಿತಿ ಸಂಗ್ರಹಿಸಿ, ರವಾನಿಸಲು ಹಾಗೂ ಪ್ರಯಾಣಿಕರ ಸಮಸ್ಯೆಗೆ ಪರಿಹಾರ ನೀಡಲು ವಾರ್‌ ರೂಂ ತೆರೆಯುವಂತೆಯೂ ಸಚಿವಾಲಯ ಸೂಚಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ‘ವಿಮಾನ ನಿಲ್ದಾಣಗಳಲ್ಲಿ ದಿನದ 24 ಗಂಟೆಗಳ ಕಾಲ ಭದ್ರತೆ ಒದಗಿಸಲು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF)ಯಲ್ಲಿ ಸಾಕಷ್ಟು ಸಿಬ್ಬಂದಿ ಇದ್ದಾರೆ’ ಎಂದಿದ್ದಾರೆ.

ವಿಮಾನ ಹಾರಾಟದಲ್ಲಿ ವಿಳಂಬದಿಂದಾಗಿ ದೆಹಲಿ ನಿಲ್ದಾಣದಲ್ಲಿ ಇಂಡಿಗೊ ವಿಮಾನದ ಸಹ ಪೈಲಟ್‌ ಮೇಲೆ ಪ್ರಯಾಣಿಕರೊಬ್ಬರು ಹಲ್ಲೆ ನಡೆಸಿದ್ದು ಹಾಗೂ ಮುಂಬೈ ವಿಮಾನ ನಿಲ್ದಾಣದಲ್ಲಿ ನೆಲದ ಮೇಲೆ ಪ್ರಯಾಣಿಕರು ಕುಳಿತು ಊಟ ಮಾಡಿದ್ದು ವರದಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.