ADVERTISEMENT

500 ಉಗ್ರರು ನುಸುಳುವ ಮುನ್ಸೂಚನೆ: ದಾಳಿಗೆ ಸಿದ್ಧವಿರಲು ಸೈನಿಕರಿಗೆ ಸೇನೆ ಸೂಚನೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2019, 13:44 IST
Last Updated 23 ಸೆಪ್ಟೆಂಬರ್ 2019, 13:44 IST
   

ನವದೆಹಲಿ: ಭಾರತದೊಳಗೆ ನುಗ್ಗಿ ಅಶಾಂತಿ ಸೃಷ್ಟಿಸುವ ಸಲುವಾಗಿ ಪಾಕಿಸ್ತಾನದ ಉಗ್ರರ ಅಡುಗುದಾಣಗಳಲ್ಲಿ 450–500 ಭಯೋತ್ಪಾದಕರು ಸನ್ನದ್ದ ಸ್ಥಿತಿಯಲ್ಲಿರುವ ಬಗ್ಗೆ ಭಾರತಕ್ಕೆ ಮಾಹಿತಿ ಸಿಕ್ಕಿದ್ದು, ಗಡಿ ನಿಯಂತ್ರಣ ರೇಖೆಯಲ್ಲಿ ಯಾವುದೇ ಕ್ಷಣದಲ್ಲಿ ಎಂಥದ್ದೇ ಕಾರ್ಯಾಚರಣೆ ನಡೆಸಲು ಭಾರತೀಯ ಸೈನಿಕರಿಗೆ ಸೂಚನೆ ನೀಡಲಾಗಿದೆ.

ತರಬೇತಿ ಪಡೆದ ಉಗ್ರರ ತಂಡಗಳು ಭಾರತದ ಒಳಗೆ ನುಸುಳಲು ಬಾಲಾಕೋಟ್‌ನಲ್ಲಿ ಹೊಂಚು ಹಾಕಿ ಕುಳಿತಿವೆ ಎಂದು ಭಾರತಕ್ಕೆ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ.

ಸೋಮವಾರ ಇದೇ ವಿಷಯವಾಗಿ ಮಾತನಾಡಿದ್ದ ಭಾರತೀಯ ಸೇನೆ ಮುಖ್ಯಸ್ಥ ಬಿಪಿನ್‌ ರಾವತ್‌, ‘ಭಾರತೀಯ ಸೇನೆ ದಾಳಿ ಮಾಡಿ ನಾಶ ಮಾಡಿದ್ದ ಬಾಲಾಕೋಟ್‌ ಪ್ರದೇಶವನ್ನು ಪಾಕಿಸ್ತಾನ ಮತ್ತೆ ಸಕ್ರಿಯಗೊಳಿಸಿದೆ,’ ಎಂದು ಹೇಳಿದ್ದರು.

ADVERTISEMENT

ಪಾಕಿಸ್ತಾನದ ಲಿಪಾ ಕಣಿವೆಗಳಲ್ಲಿರುವ ಅಡಗುದಾಣಗಳಲ್ಲಿ ಭಯೋತ್ಪಾದಕರು ಅವಿತುಕುಳಿತಿದ್ದಾರೆ. ಸೂಚನೆಗಾಗಿ ಕಾಯುತ್ತಿರುವ ಅವರು ಯಾವಾಗಬೇಕಾದರೂ ಭಾರತದ ಒಳಗೆ ನುಸುಳಿ ವಿಧ್ವಂಸಕ ಕೃತ್ಯವೆಸಗಬಹುದು. ಭಾರತದ ಪ್ರಮುಖ ನಗರಗಳು, ಕಟ್ಟಡಗಳ ಮೇಲೆ ದಾಳಿ ಮಾಡಲು ಯೋಜನೆ ರೂಪಿಸಿದ್ದಾರೆ ಎಂಬ ಮಾಹಿತಿ ಭಾರತಕ್ಕೆ ಲಭ್ಯವಾಗಿದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.