ADVERTISEMENT

ಹಣ್ಣಿನ ವಿಚಾರಕ್ಕೆ ಮಾರಾಟಗಾರನಿಗೆ ಗುಂಡಿಟ್ಟ ಭದ್ರತಾ ಸಿಬ್ಬಂದಿ

ಏಜೆನ್ಸೀಸ್
Published 4 ಜುಲೈ 2020, 6:36 IST
Last Updated 4 ಜುಲೈ 2020, 6:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನೋಯ್ಡಾ: ಮಾವಿನಹಣ್ಣಿನ ವಿಚಾರವಾಗಿ ಖೋಡಾ ಕಾಲೋನಿ ಬಳಿ ಹಣ್ಣು ಮಾರಾಟಗಾರನನ್ನು ಗುಂಡಿಕ್ಕಿದ ಆರೋಪದ ಮೇಲೆ ನೋಯ್ಡಾದ ಖಾಸಗಿ ಭದ್ರತಾ ಸಿಬ್ಬಂದಿಯನ್ನು ಬಂಧಿಸಲಾಗಿದೆ.

ಮಾವಿನ ಹಣ್ಣಿನ ಬೆಲೆಯ ಬಗ್ಗೆ ಇಬ್ಬರ ನಡುವೆ ವಾದ ಉಂಟಾಗಿದೆ. ವಾಗ್ವಾದ ವಿಕೋಪಕ್ಕೆ ತಿರುಗಿ ಆರೋಪಿಯು ಹಣ್ಣು ಮಾರಾಟಗಾರನಿಗೆ ಗುಂಡು ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಮಾರಾಟಗಾರನ ಕಾಲಿಗೆ ಗುಂಡು ತಗುಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಹೆಚ್ಚುವರಿ ಉಪ ಆಯುಕ್ತ ರಣ್‌ವಿಜಯ್ ಸಿಂಗ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.