ADVERTISEMENT

ನ್ಯಾಯಸಮ್ಮತವಲ್ಲದ ಕಾನೂನು ವಿರುದ್ಧ ಶಾಂತಿಯುತ ಪ್ರತಿಭಟನೆಯೇ ಸತ್ಯಾಗ್ರಹ: ಚಿದಂಬರಂ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2020, 7:33 IST
Last Updated 7 ಫೆಬ್ರುವರಿ 2020, 7:33 IST
ಪಿ. ಚಿದಂಬರಂ
ಪಿ. ಚಿದಂಬರಂ   

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಅವರ ಮೇಲೆ ಸಾರ್ವಜನಿಕ ಸುರಕ್ಷತಾಕಾಯ್ದೆ ಹೇರಿ ಬಂಧನದ ಅವಧಿ ವಿಸ್ತರಣೆ ಮಾಡಿದ ಸರ್ಕಾರದ ಕ್ರಮವನ್ನುಕಾಂಗ್ರೆಸ್ ನಾಯಕ ಪಿ.ಚಿದಂಬರಂ ಟೀಕಿಸಿದ್ದಾರೆ.

ಪಿಡಿಪಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನೇತಾರರು ಸೇರಿದಂತೆ ಇನ್ನಿಬ್ಬರು ನಾಯಕರ ಮೇಲೆ ಪಿಎಸ್‌ಎ ಹೇರಿರುವ ಬಗ್ಗೆ ಗಾಬರಿ ವ್ಯಕ್ತಪಡಿಸಿ ಚಿದಂಬರಂ ಸರಣಿ ಟ್ವೀಟ್ ಮಾಡಿದ್ದಾರೆ.

ಯಾವುದೇ ಆರೋಪವಿಲ್ಲದೆ ಬಂಧಿಸುವುದು ಪ್ರಜಾಪ್ರಭುತ್ವದಲ್ಲಿ ಅಸಹನೀಯವಾದ ಕೆಲಸ.
ನ್ಯಾಯಸಮ್ಮತವಲ್ಲದ ಕಾನೂನು ಅಂಗೀಕಾರವಾದರೆ ಅಥವಾ ನ್ಯಾಯವಲ್ಲದ ಕಾನೂನಿಗಾಗಿ ಬೇಡಿಕೆ ಬಂದರೆ ಶಾಂತಿಯುತವಾದ ಪ್ರತಿಭಟನೆ ಮಾಡುವುದು ಬಿಟ್ಟರೆ ಜನರಲ್ಲಿ ಬೇರೆ ಯಾವ ಆಯ್ಕೆ ಇದೆ?

ADVERTISEMENT

ಸಂಸತ್ ಮತ್ತು ವಿಧಾನಸಭೆಯಲ್ಲಿ ಅಂಗೀಕಾರವಾದ ಕಾನೂನನ್ನು ಪಾಲಿಸಬೇಕು. ಪ್ರತಿಭಟನೆಗಳು ಅರಾಜಕತೆಯತ್ತ ಕೊಂಡೊಯ್ಯುತ್ತವೆ ಎಂದು ಪ್ರಧಾನಿ ಹೇಳುತ್ತಿದ್ದಾರೆ. ಅವರು ಮಹಾತ್ಮ ಗಾಂಧಿ, ಮಾರ್ಟಿನ್ ಲೂಥರ್ ಕಿಂಗ್ ಮತ್ತು ನೆಲ್ಸನ್ ಮಂಡೇಲಾ ಅವರ ಪ್ರೇರಣಾತ್ಮಕ ಉದಾಹರಣೆಗಳನ್ನು ಮತ್ತು ಚರಿತ್ರೆಯನ್ನು ಮರೆತಿದ್ದಾರೆ.

ನ್ಯಾಯಸಮ್ಮತವಲ್ಲದ ಕಾನೂನನ್ನು ಶಾಂತಿಯುತ ಪ್ರತಿಭಟನೆ ಮತ್ತು ನಾಗರಿಕ ಅವಿಧೇಯತೆ ಮೂಲಕ ವಿರೋಧಿಸಬೇಕು. ಅದುವೇ ಸತ್ಯಾಗ್ರಹ ಎಂದು ಚಿದಂಬರಂ ಟ್ವೀಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.