ADVERTISEMENT

ಶೆಫಾಲಿ ʼವಿಶೇಷ ಪ್ರತಿಭೆʼ; ಜಯದ ಸ್ಥಿರತೆ ಕಾಪಾಡಿಕೊಳ್ಳಲು ನೆರವು: ರಮೇಶ್ ಪೊವಾರ್

ಏಜೆನ್ಸೀಸ್
Published 3 ಜೂನ್ 2021, 9:20 IST
Last Updated 3 ಜೂನ್ 2021, 9:20 IST
   

ಮುಂಬೈ:ಭಾರತ ಮಹಿಳಾ ಕ್ರಿಕೆಟ್‌ ತಂಡದ ಕೋಚ್‌ ರಮೇಶ್ ಪೊವಾರ್ ಅವರು ಯುವ ಆಟಗಾರ್ತಿ ಶೆಫಾಲಿ ವರ್ಮಾ ಅವರನ್ನು ವಿಶೇಷ ಪ್ರತಿಭೆ ಎಂದು ಬಣ್ಣಿಸಿದ್ದಾರೆ.

ಸ್ಫೋಟಕ ಬ್ಯಾಟಿಂಗ್‌ ನಡೆಸುವಶೆಫಾಲಿ, ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿ ಮಾತ್ರವಲ್ಲದೆ, ಇದೇ ಮೊದಲ ಬಾರಿಗೆ ಏಕದಿನ ಮತ್ತು ಟೆಸ್ಟ್‌ ಸರಣಿಗೂಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ʼತಂಡದಲ್ಲಿರುವ ಪ್ರತಿಯೊಬ್ಬ ಆಟಗಾರ್ತಿಯೂ ಫಲಿತಾಂಶದ ಮೇಲೆ ಪರಿಣಾಮ ಬೀರಬಲ್ಲರು ಎಂದು ನನಗನಿಸುತ್ತದೆ. ಶೆಫಾಲಿ ವಿಶೇಷ ಪ್ರತಿಭೆ. ಉತ್ತಮಮೊತ್ತವನ್ನುಕಲೆಹಾಕಲು ನೆರವಾಗುವ ಪ್ರತಿಯೊಂದು ಸಂಯೋಜನೆಯನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ. ವಾಸ್ತವದಲ್ಲಿ ನಾವು ಆ ಹಂತವನ್ನು ಮೀರಲು ಬಯಸುತ್ತೇವೆ. ನಾವು ಎ ಅಥವಾ ಬಿ ರೀತಿಯ ಯಾವ ಗುರಿಯನ್ನೂ ಹೊಂದಿಲ್ಲ.ನಾವು ಗುರಿಗಳನ್ನು ನಿರ್ಧರಿಸಲು ಪ್ರಯತ್ನಿಸುತ್ತಿದ್ದೇವೆ. ಅದು ಕೆಲವೊಮ್ಮೆ 270 ರನ್‌ ಆಗಿರಬಹುದು, ಕೇವಲ ಇನ್ನೂರೂ ಆಗಿರಬಹುದು. ನಾವು ಗೆಲುವಿನ ಸ್ಥಿರತೆ ಕಾಯ್ದುಕೊಳ್ಳಲುನೆರವಾಗುವ ಸಂಯೋಜನೆಗಳನ್ನು ಹುಡುಕುತ್ತಿದ್ದೇವೆʼ ಎಂದು ತಿಳಿಸಿದ್ದಾರೆ.

ADVERTISEMENT

ಶೆಫಾಲಿಯಂತಹ ಯುವ ಆಟಗಾರ್ತಿಯರಿಗೆ ತರಬೇತಿ ನೀಡುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ರಮೇಶ್‌, ʼಇದು ಅವರು ಅಭ್ಯಾಸದ ಅವಧಿಯನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಅವಲಂಭಿಸಿದೆ.ನಾವು ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಿದಾಗ ಪೃಥ್ವಿ ಶಾ ಅವರೊಂದಿಗೆ ಸಾಕಷ್ಟು ಸಾಧಿಸಿದ್ದೇವೆ. ಕಾದುನೋಡಬೇಕಿದೆʼ ಎಂದಿದ್ದಾರೆ.

ಇಂಗ್ಲೆಂಡ್‌ ವಿರುದ್ಧದ ಒಂದು ಟೆಸ್ಟ್‌, ತಲಾ ಮೂರು ಏಕದಿನ ಮತ್ತು ಟಿ20 ಪಂದ್ಯಗಳ ಸರಣಿಗಳು ಇದೇ ತಿಂಗಳು ಆರಂಭವಾಗಲಿವೆ. ನಾಲ್ಕು ಪಂದ್ಯಗಳ ಟೆಸ್ಟ್‌ ಜೂನ್‌ 16ರಿಂದ, ಏಕದಿನ ಸರಣಿ ಜೂನ್‌27ರಿಂದ ಮತ್ತುಟಿ20 ಸರಣಿ ಜುಲೈ9ರಿಂದ ಆರಂಭವಾಗಲಿವೆ.

ಟೆಸ್ಟ್‌ಮತ್ತು ಏಕದಿನ ಸರಣಿಗೆ ಭಾರತ ತಂಡ: ಮಿಥಾಲಿ ರಾಜ್‌ (ನಾಯಕಿ), ಸ್ಮೃತಿ ಮಂದಾನ, ಹರ್ಮನ್‌ಪ್ರೀತ್‌ ಕೌರ್‌ (ಉಪನಾಯಕಿ), ಪೂನಂ ರಾವುತ್‌, ಪ್ರಿಯಾ ಪೂನಿಯಾ, ದೀಪ್ತಿ ಶರ್ಮಾ, ಜೆಮಿಯಾ ರಾಡ್ರಿಗಸ್‌, ಶಫಾಲಿ ವರ್ಮಾ, ಸ್ನೇಹ್‌ ರಾಣಾ, ತಾನಿಯಾ ಭಾಟಿಯಾ (ವಿಕೆಟ್‌ ಕೀಪರ್‌), ಇಂದ್ರಾಣಿ ರಾಯ್‌ (ವಿಕೆಟ್‌ ಕೀಪರ್‌), ಜೂಲನ್‌ ಗೋಸ್ವಾಮಿ, ಶಿಖಾ ಪಾಂಡೆ, ಪೂಜಾ ವಸ್ತ್ರಾಕರ್‌, ಅರುಂಧತಿ ರೆಡ್ಡಿ, ಪೂನಮ್‌ ಯಾದವ್‌, ಏಕ್ತಾ ಬಿಸ್ತ್‌, ರಾಧಾ ಯಾದವ್‌

ಟಿ20 ಸರಣಿಗೆ ತಂಡ: ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ),ಸ್ಮೃತಿ ಮಂದಾನ (ಉಪನಾಯಕಿ), ಹರ್ಮನ್‌ಪ್ರೀತ್‌ ಕೌರ್‌ (ಉಪನಾಯಕಿ),‌ದೀಪ್ತಿ ಶರ್ಮಾ, ಜೆಮಿಯಾ ರಾಡ್ರಿಗಸ್‌, ಶಫಾಲಿ ವರ್ಮಾ, ರಿಚಾ ಘೋಷ್‌, ಹರ್ಲೀನ್‌ ಡಿಯೊಲ್‌,ಸ್ನೇಹ್‌ ರಾಣಾ, ತಾನಿಯಾ ಭಾಟಿಯಾ (ವಿಕೆಟ್‌ ಕೀಪರ್‌), ಇಂದ್ರಾಣಿ ರಾಯ್‌ (ವಿಕೆಟ್‌ ಕೀಪರ್‌), ಶಿಖಾ ಪಾಂಡೆ,ಪೂನಂ ಯಾದವ್‌, ಪೂಜಾ ವಸ್ತ್ರಾಕರ್‌,ಅರುಂಧತಿ ರೆಡ್ಡಿ, ಪೂನಮ್‌ ಯಾದವ್‌, ಏಕ್ತಾ ಬಿಸ್ತ್‌, ರಾಧಾ ಯಾದವ್‌, ಸಿಮರಾನ್‌ ದಿಲ್‌ ಬಹದೂರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.