ಬಾಲ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ಮೊದಲ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಲು ಅಯೋಧ್ಯೆಗೆ ಭಕ್ತರು ತಂಡೋಪತಂಡವಾಗಿ ಶನಿವಾರ ಆಗಮಿಸಿದರು
–ಪಿಟಿಐ ಚಿತ್ರ
ಲಖನೌ: ಪಂಜಾಬ್ನ ಫಾಜಿಲ್ಕಾ ಜಿಲ್ಲೆಯ ಅಬೋಹರ ಪಟ್ಟಣದ 6 ವರ್ಷದ ಬಾಲಕನೊಬ್ಬ ಬಾಲ ರಾಮನ ದರ್ಶನಕ್ಕಾಗಿ ಸಾವಿರ ಕಿ.ಮೀ. ಓಡಿ ಅಯೋಧ್ಯೆ ತಲುಪಿ ಗಮನ ಸೆಳೆದಿದ್ದಾನೆ.
ಮೂರ್ತಿ ಪ್ರತಿಷ್ಠಾಪನೆಯ ಮೊದಲ ವಾರ್ಷಿಕೋತ್ಸವದ ಅಂಗವಾಗಿ ಬಾಲ ರಾಮನ ದರ್ಶನ ಪಡೆಯುವ ಉದ್ದೇಶದಿಂದ ಅಬೋಹರ ನಿವಾಸಿ ಮೊಹಬ್ಬತ್, ಸಾವಿರ ಕಿ.ಮೀ. ಕ್ರಮಿಸಿ ಅಯೋಧ್ಯೆಯನ್ನು ಶನಿವಾರ ತಲುಪಿದ್ದಾನೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಅಂಗವಸ್ತ್ರ ಹಾಗೂ ಚಾಕೊಲೇಟ್ ನೀಡಿ ಮೊಹಬ್ಬತ್ನನ್ನು ಸನ್ಮಾನಿಸಿದ್ದಾರೆ.
‘ಕಳೆದ ವರ್ಷ ನವೆಂಬರ್ 14ರಂದು ಮೊಹಬ್ಬತ್ ಓಡಲು ಪ್ರಾರಂಭಿಸಿದ್ದ. ದಿನಕ್ಕೆ 19–20 ಕಿ.ಮೀ. ಕ್ರಮಿಸುತ್ತಿದ್ದ’ ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.