ADVERTISEMENT

'ರಾಹುಲ್‌ನ್ನು ಅವಮಾನಿಸುವುದಕ್ಕಾಗಿಯೇ ಸ್ಮೃತಿ ಅಮೇಠಿಯಲ್ಲಿ ಚಪ್ಪಲಿ ವಿತರಿಸಿದ್ದು'

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 13:51 IST
Last Updated 22 ಏಪ್ರಿಲ್ 2019, 13:51 IST
   

ನವದೆಹಲಿ: ರಾಹುಲ್ ಗಾಂಧಿಯನ್ನು ಅವಮಾನಿಸುವುದಕ್ಕಾಗಿಯೇಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಅಮೇಠಿಯಲ್ಲಿ ಚಪ್ಪಲಿ ವಿತರಿಸಿದ್ದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಸ್ಮೃತಿ ಇರಾನಿ ಇಲ್ಲಿಗೆ ಬಂದು ಜನರಿಗೆ ಚಪ್ಪಲಿ ವಿತರಿಸಿದ್ದಾರೆ.ಅಮೇಠಿಯಲ್ಲಿರುವ ಜನರಿಗೆ ಧರಿಸಲು ಚಪ್ಪಲಿ ಇಲ್ಲಎಂದು ಅವರಿಗೆ ತೋರಿಸಿಕೊಡಬೇಕಾಗಿತ್ತು. ರಾಹುಲ್ ಗಾಂಧಿಯನ್ನು ಅವಮಾನಿಸುವುದೇ ಅವರ ಉದ್ದೇಶವಾಗಿತ್ತು.ಅವರು ಅಮೇಠಿಯ ಜನರನ್ನೇ ಅವಮಾನಿಸಿದ್ದಾರೆ ಎಂದಿದ್ದಾರೆ ಪ್ರಿಯಾಂಕಾ.

ಪ್ರಿಯಾಂಕಾ ಅವರ ಈ ಟೀಕೆಗೆ ಪ್ರತಿಕ್ರಿಯಿಸಿದ ಸ್ಮೃತಿ ಇರಾನಿ, ನಾನು ನಟಿ ಆಗಿದ್ದರೂ ಪ್ರಿಯಾಂಕಾ ಚೆನ್ನಾಗಿ ನಾಟಕ ಮಾಡುತ್ತಾರೆ.ಅಲ್ಲಿಯ ಜನರಿಗೆ ಧರಿಸಲು ಶೂ ಇಲ್ಲ, ಅವರಿಗೆ ಒಂದಷ್ಟು ಮರ್ಯಾದೆ ಇದ್ದರೆ ಅಲ್ಲಿಗೆ ಹೋಗಿ ನೋಡಲಿ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.