ADVERTISEMENT

ಹಿಮಪಾತ: ಜಮ್ಮು–ಶ್ರೀನಗರ ಹೆದ್ದಾರಿ ಬಂದ್‌

ಪಿಟಿಐ
Published 22 ಜನವರಿ 2019, 11:15 IST
Last Updated 22 ಜನವರಿ 2019, 11:15 IST
ಜವಾಹರ್‌ ಸುರಂಗ ಮಾರ್ಗಕ್ಕೆ ಅಡ್ಡಿಯಾಗಿದ್ದ ಹಿಮವನ್ನು ತೆರವುಗೊಳಿಸಿದ ರಕ್ಷಣಾ ಸಿಬ್ಬಂದಿ– ಪಿಟಿಐ ಚಿತ್ರ
ಜವಾಹರ್‌ ಸುರಂಗ ಮಾರ್ಗಕ್ಕೆ ಅಡ್ಡಿಯಾಗಿದ್ದ ಹಿಮವನ್ನು ತೆರವುಗೊಳಿಸಿದ ರಕ್ಷಣಾ ಸಿಬ್ಬಂದಿ– ಪಿಟಿಐ ಚಿತ್ರ   

ಶ್ರೀನಗರ: ತೀವ್ರ ಹಿಮಪಾತದಿಂದ ಖ್ವಾಜಿಗುಂಡ್‌ ಮೂಲಕ ಪ್ರವೇಶಿಸುವ ಜವಾಹರ್‌ ಸುರಂಗ ಮಾರ್ಗ ಮುಚ್ಚಿದ್ದು, ಜಮ್ಮು ಮತ್ತು ಶ್ರೀನಗರ ನಡುವಿನ ಹೆದ್ದಾರಿ ಸಂಚಾರ ಸ್ಥಗಿತಗೊಂಡಿದೆ.

ಸುರಂಗದ ಒಳಗೆ ಸಿಲುಕಿದ್ದ ಪ್ರಯಾಣಿಕರನ್ನು ಹೊರತರುವ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಹಿಮಪಾತದಿಂದ ಕಾಶ್ಮೀರದಿಂದ ದೇಶದ ವಿವಿಧ ಭಾಗಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲೂ ವ್ಯತ್ಯಯಗೊಂಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.