ADVERTISEMENT

ಪೆಟ್ರೋಲ್‌ ಬೆಲೆ ಏರಿಕೆ ಖಂಡಿಸಿ ಅಧಿವೇಶನಕ್ಕೆ ಸೈಕಲ್‌ನಲ್ಲಿ ಬಂದ ಸಚಿವ

ಪಿಟಿಐ
Published 7 ಜುಲೈ 2021, 9:49 IST
Last Updated 7 ಜುಲೈ 2021, 9:49 IST
ಕೋಲ್ಕತ್ತದಲ್ಲಿ ‍ಪೆಟ್ರೋಲ್‌ ಬೆಲೆ ಏರಿಕೆಯನ್ನು ಖಂಡಿಸಿ ಟಿಎಂಸಿ ಶಾಸಕರಾದ ಬೆಚರಾಮ್  ಮನ್ನಾ  ಮತ್ತು ಕಲ್ಯಾಣ್‌ ಘೋಶ್‌  ಸೈಕಲ್‌ ಜಾಥ ನಡೆಸಿದರು           –ಪಿಟಿಐ ಚಿತ್ರ
ಕೋಲ್ಕತ್ತದಲ್ಲಿ ‍ಪೆಟ್ರೋಲ್‌ ಬೆಲೆ ಏರಿಕೆಯನ್ನು ಖಂಡಿಸಿ ಟಿಎಂಸಿ ಶಾಸಕರಾದ ಬೆಚರಾಮ್  ಮನ್ನಾ  ಮತ್ತು ಕಲ್ಯಾಣ್‌ ಘೋಶ್‌  ಸೈಕಲ್‌ ಜಾಥ ನಡೆಸಿದರು           –ಪಿಟಿಐ ಚಿತ್ರ   

ಕೋಲ್ಕತ್ತ: ಪಶ್ಚಿಮ ಬಂಗಾಳದ ಕಾರ್ಮಿಕ ಸಚಿವ ಬೆಚರಾಮ್ ಮನ್ನಾ ಅವರು ಪೆಟ್ರೋಲ್‌ ಬೆಲೆ ಏರಿಕೆ ಖಂಡಿಸಿ ಮನೆಯಿಂದ 38 ಕಿ.ಮೀ. ದೂರದಲ್ಲಿರುವ ವಿಧಾನಸಭೆಗೆಬುಧವಾರ ಸೈಕಲ್‌ನಲ್ಲಿಯೇ ಬರುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಇದರಲ್ಲಿ ಪಕ್ಷದ ಕೆಲ ಕಾರ್ಯಕರ್ತರು ಭಾಗವಹಿಸಿದ್ದರು.

ಸಿಂಗೂರ್‌ನ ಶಾಸಕರಾಗಿರುವ ಮನ್ನಾ ತಮ್ಮ ಮನೆಯಿಂದ ಬೆಳಿಗ್ಗೆ 8 ಗಂಟೆಗೆ ಸೈಕಲ್ ಮೂಲಕ ತೆರಳಿ, ಮಧ್ಯಾಹ್ನ 12.30 ಸುಮಾರಿಗೆ ಕೋಲ್ಕತ್ತದಲ್ಲಿರುವ ವಿಧಾನಸಭೆಯ ಸಭಾಂಗಣ ತಲುಪಿ ಅಧಿವೇಶನದಲ್ಲಿ ಭಾಗಿಯಾದರು.

‘ದೇಶದಲ್ಲಿ ಕ್ರಮೇಣ ಇಂಧನ ಬೆಲೆ ಏರಿಕೆಯಾಗುತ್ತಿದೆ. ಇದು ನರೇಂದ್ರ ಮೋದಿ ಸರ್ಕಾರದ ವೈಫಲ್ಯವಾಗಿದೆ. ಕೋಲ್ಕತ್ತದಲ್ಲಿ ಪೆಟ್ರೋಲ್‌ ದರ ₹100ರ ಗಡಿ ದಾಟಿದೆ. ಇದನ್ನು ವಿರೋಧಿಸಿ ನಾವು ಪ್ರತಿಭಟಿಸಿದ್ದೇವೆ’ ಎಂದು ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.