ADVERTISEMENT

ರಾಜಸ್ಥಾನ | ‘ಹುತಾತ್ಮರಿಗೆ ನಮನ’ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಹೊಡೆದಾಟ

ಏಜೆನ್ಸೀಸ್
Published 27 ಜೂನ್ 2020, 3:40 IST
Last Updated 27 ಜೂನ್ 2020, 3:40 IST
   

ಅಜ್ಮೀರ್ (ರಾಜಸ್ಥಾನ):ಚೀನಾ ಸೇನೆ ವಿರುದ್ಧ ನಡೆಸಂಘರ್ಷದ ವೇಳೆ ಹುತಾತ್ಮರಾಗಿದ್ದ ಭಾರತೀಯ ಸೇನೆ ಸಿಬ್ಬಂದಿಗೆ ಗೌರವ ಸಲ್ಲಿಸುವ ಸಲುವಾಗಿ, ಕಾಂಗ್ರೆಸ್‌ ಪಕ್ಷ ಇಲ್ಲಿ ಏರ್ಪಡಿಸಿದ್ದ ಸಂತಾಪ ಸಭೆಯಲ್ಲಿ ಕಾರ್ಯಕರ್ತರಿಬ್ಬರು ಹೊಡೆದಾಟ ನಡೆಸಿದ್ದಾರೆ.

ಹೊಡೆದಾಟದ ವಿಡಿಯೊ ವೈರಲ್‌ ಆಗಿದೆ. ಸದ್ಯ ಕೋವಿಡ್–19 ಭೀತಿ ಇದ್ದರೂ ಸಭೆಯಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳುವ ನಿಯಮವೂ ಪಾಲನೆಯಾಗಿಲ್ಲ ಎಂದು ವರದಿಯಾಗಿದೆ.

ಲಡಾಖ್‌ನ ಗಾಲ್ವನ್‌ ಕಣಿವೆಯಲ್ಲಿಜೂನ್‌ 15ರ ರಾತ್ರಿ ನಡೆದ ಸಂಘರ್ಷದ ವೇಳೆ 20 ಯೋಧರು ಹುತಾತ್ಮರಾಗಿದ್ದರು.

ADVERTISEMENT

ಅಧ್ಯಕ್ಷೆ ಸೋನಿಯಾ ಗಾಂಧಿ ನೀಡಿದ್ದ ಕರೆಯ ಮೇರೆಗೆ ಕಾಂಗ್ರೆಸ್‌ ಪಕ್ಷ ‘ಹುತಾತ್ಮರಿಗೆ ನಮನ’ ಕಾರ್ಯಕ್ರಮವನ್ನು ಶುಕ್ರವಾರದೇಶದಾದ್ಯಂತ ಆಯೋಜಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.