ADVERTISEMENT

ಜೈಸಲ್ಮೇರ್‌: ಗುಜರಿಯಲ್ಲಿದ್ದ ಗುಂಡು ಸಿಡಿದು ವ್ಯಕ್ತಿ ಸಾವು

ಪಿಟಿಐ
Published 30 ಏಪ್ರಿಲ್ 2021, 10:39 IST
Last Updated 30 ಏಪ್ರಿಲ್ 2021, 10:39 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಜೈಸಲ್ಮೇರ್‌: ಇಲ್ಲಿನ ಪೋಖರಣ್‌ನಲ್ಲಿರುವ ಫೈರಿಂಗ್‌ ರೇಂಜ್‌ ಪ್ರದೇಶದಲ್ಲಿರುವ ಗುಜರಿಯಲ್ಲಿದ್ದ ಗುಂಡು ಸಿಡಿದ ಪರಿಣಾಮ 23 ವರ್ಷದ ವ್ಯಕ್ತಿ ಸಾವನ್ನಪ್ಪಿದ ಘಟನೆ ಶುಕ್ರವಾರ ಸಂಭವಿಸಿದೆ.

ಗಂಗಾನಗರ ಜಿಲ್ಲೆಯ ರಾಯ್‌ಸಿಂಗ್ ನಗರದ ನಿವಾಸಿ ರವೀಂದ್ರ ಮೃತ ದುರ್ದೈವಿ.

ಫೈರಿಂಗ್‌ ಪ್ರದೇಶದಲ್ಲಿ ಹಾಕಲಾಗಿದ್ದ ಗುಜರಿಯನ್ನು ಸಂಗ್ರಹಿಸುತ್ತಿದ್ದ ಸಮಯದಲ್ಲಿ ಗುಂಡು ಸಿಡಿದಿದೆ.

ADVERTISEMENT

ಇತರ ವಸ್ತುಗಳಿಂದ ಲೋಹಗಳನ್ನು ಪ್ರತ್ಯೇಕಿಸುತ್ತಿದ್ದ ವೇಳೆ ಈ ಸ್ಫೋಟ ಸಂಭವಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.