ADVERTISEMENT

ವಂದೇ ಭಾರತ್‌ ಮಿಷನ್‌| ಸಿಂಗಪುರದಿಂದ 234 ಮಂದಿ ಭಾರತೀಯರನ್ನು ಕರೆತಂದ ಏರ್ ಇಂಡಿಯಾ

ಪಿಟಿಐ
Published 11 ಮೇ 2020, 1:35 IST
Last Updated 11 ಮೇ 2020, 1:35 IST
ಎಎನ್‌ಐ ಟ್ವಿಟರ್‌ ಚಿತ್ರ
ಎಎನ್‌ಐ ಟ್ವಿಟರ್‌ ಚಿತ್ರ   

ನವದೆಹಲಿ: ‘ಸಿಂಗಾಪುರದಿಂದ ಏರ್‌ ಇಂಡಿಯಾ ವಿಮಾನಶುಕ್ರವಾರ ಬೆಳಿಗ್ಗೆ 234 ಮಂದಿ ಭಾರತೀಯರೊಂದಿಗೆದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ’ ಎಂದು ವಿಮಾನಯಾನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕೊರೊನಾ ವೈರಸ್‌ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯ ಪ್ರಜೆಗಳನ್ನು ಸ್ವದೇಶಕ್ಕೆ ಕರೆತರಲು ಗುರುವಾರ ವಂದೇ ಭಾರತ್‌ ಕಾರ್ಯಾಚರಣೆಯನ್ನು ಆರಂಭಿಸಲಾಗಿತ್ತು.

‘234 ಮಂದಿ ಭಾರತೀಯರನ್ನು ಕರೆತಂದ ಏರ್‌ ಇಂಡಿಯಾ ಬಿ–787 ವಿಮಾನ ಬೆಳಿಗ್ಗೆ 11.45ರ ಸುಮಾರಿಗೆ ದೆಹಲಿ ವಿಮಾಣ ನಿಲ್ದಾಣಕ್ಕೆ ಬಂದಿಳಿದಿದೆ’ ಎಂದು ವಿಮಾನಯಾನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.