ADVERTISEMENT

ನಟ ಸೂರ್ಯ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ವಣ್ಣಿಯಾರ್‌ ಸಂಗಮ್‌

ಮುಂದುವರೆದ ಜೈ ಭೀಮ್‌ ಸಂಘರ್ಷ 

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2021, 15:42 IST
Last Updated 23 ನವೆಂಬರ್ 2021, 15:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚೆನ್ನೈ: ಪಿಎಂಕೆ ಮಾತೃ ಸಂಸ್ಥೆಯಾದ ವಣ್ಣಿಯಾರ್‌ ಸಂಗಮ್‌ ಸಂಸ್ಥೆಯು ‘ಜೈ ಭೀಮ್‌’ ಚಿತ್ರದ ನಾಯಕ ಸೂರ್ಯ ಮತ್ತು ಇತರರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದೆ.

ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದಿರುವ ಈ ಚಿತ್ರದಲ್ಲಿ ವಣ್ಣಿಯಾರ್‌ ಸಮುದಾಯವನ್ನು ಉದ್ದೇಶಪೂರ್ವಕವಾಗಿ ಅವಮಾನಿಸಲಾಗಿದೆ. ಆದ್ದರಿಂದ ಚಿತ್ರದ ನಾಯಕ ನಟ ಸೂರ್ಯ ಮತ್ತು ಇತರರ ವಿರುದ್ಧ ವಿವಿಧ ಐಪಿಸಿ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಬೇಕು ಎಂದು ಸಂಸ್ಥೆಯು ಮಂಗಳವಾರ ಕಡಲೂರು ಜಿಲ್ಲೆಯ ಸ್ಥಳೀಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT