ADVERTISEMENT

Vijay Diwas: ರಾಷ್ಟ್ರಪತಿ ಮುರ್ಮು, PM ಮೋದಿ ಸೇರಿ ಗಣ್ಯರಿಂದ ಯೋಧರಿಗೆ ಗೌರವ ನಮನ

ಪಿಟಿಐ
Published 16 ಡಿಸೆಂಬರ್ 2025, 5:52 IST
Last Updated 16 ಡಿಸೆಂಬರ್ 2025, 5:52 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ವಿಜಯ ದಿವಸದ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೇರಿ ಗಣ್ಯರು ಯೋಧರಿಗೆ ಗೌರವ ನಮನ ಸಲ್ಲಿಸಿದ್ದಾರೆ.

‘ವಿಜಯ ದಿವಸ’ದ ಸಂದರ್ಭದಲ್ಲಿ ನಾನು ಭಾರತ ಮಾತೆಯ ಧೈರ್ಯಶಾಲಿ ಪುತ್ರರಿಗೆ ತಲೆಬಾಗುತ್ತೇನೆ. ಅವರ ಧೈರ್ಯ, ಶೌರ್ಯ ಮತ್ತು ತಾಯಿನಾಡಿಗೆ ಸಾಟಿಯಿಲ್ಲದ ಭಕ್ತಿ ಯಾವಾಗಲೂ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಿದೆ. ಯೋಧರ ಶೌರ್ಯ ಮತ್ತು ರಾಷ್ಟ್ರದ ಮೇಲಿನ ಪ್ರೀತಿ ದೇಶವಾಸಿಗಳಿಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ. ಭಾರತೀಯ ಸೇನೆಯ ‘ಸ್ವದೇಶೀಕರಣದಿಂದ ಸಬಲೀಕರಣ’ ಉಪಕ್ರಮವು ಭವಿಷ್ಯದ ಸವಾಲುಗಳಿಗೆ ಸಿದ್ಧರಾಗಿರುವ ಅದರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯಲ್ಲಿ ಸೇನೆಯು ಸ್ವಾವಲಂಬನೆ, ಯುದ್ಧತಂತ್ರದ ದೃಢತೆ ಮತ್ತು ಆಧುನಿಕ ಯುದ್ಧದ ಪರಿಣಾಮಕಾರಿ ಬಳಕೆಯನ್ನು ಪ್ರದರ್ಶಿಸಿದೆ. ಇದು ಇಡೀ ರಾಷ್ಟ್ರಕ್ಕೆ ಸ್ಫೂರ್ತಿಯ ಮೂಲವಾಗಿದೆ. ನಾನು ಎಲ್ಲಾ ಸೈನಿಕರಿಗೆ ಮತ್ತು ಅವರ ಕುಟುಂಬಗಳಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಜೈ ಹಿಂದ್!’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ವಿಜಯ ದಿವಸ’ದ ಪ್ರಯುಕ್ತ 1971ರಲ್ಲಿ ಭಾರತಕ್ಕೆ ಐತಿಹಾಸಿಕ ವಿಜಯ ದೊರಕಿಸಿಕೊಟ್ಟ ಧೈರ್ಯ ಮತ್ತು ತ್ಯಾಗದ ಮೂಲಕ ಹೋರಾಡಿದ ವೀರ ಸೈನಿಕರನ್ನು ನಾವು ಸ್ಮರಿಸುತ್ತೇವೆ. ಯೋಧರ ದೃಢ ಸಂಕಲ್ಪ ಮತ್ತು ನಿಸ್ವಾರ್ಥ ಸೇವೆ ನಮ್ಮ ರಾಷ್ಟ್ರವನ್ನು ರಕ್ಷಿಸಿತು ಮತ್ತು ನಮ್ಮ ಇತಿಹಾಸದಲ್ಲಿ ಹೆಮ್ಮೆಯ ಕ್ಷಣವಾಗಿ ಉಳಿಯಿತು. ಅವರ ಅಪ್ರತಿಮ ಚೈತನ್ಯವನ್ನು ನೆನಪಿಸುತ್ತದೆ. ಅವರ ಶೌರ್ಯವು ಭಾರತೀಯರ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇದೆ’ ಎಂದು ಪ್ರಧಾನಿ ನರೇಂದ್ರ ಮೋದಿ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ADVERTISEMENT

‘1971ರ ಯುದ್ಧದಲ್ಲಿ ಭಾರತದ ಗಡಿಗಳನ್ನು ರಕ್ಷಿಸುವಾಗ ತಮ್ಮ ಶೌರ್ಯ, ಸಮರ್ಪಣೆ ಮತ್ತು ಅಚಲ ಸಂಕಲ್ಪದಿಂದ ವಿಶ್ವದಾದ್ಯಂತ ಇತಿಹಾಸವನ್ನು ಸೃಷ್ಟಿಸಿದ ನಮ್ಮ ಸಶಸ್ತ್ರ ಪಡೆಗಳ ಧೈರ್ಯಶಾಲಿಗಳಿಗೆ ‘ವಿಜಯ ದಿವಸ’ದ ಪ್ರಯುಕ್ತ ಗೌರವ ಸಲ್ಲಿಸುತ್ತೇನೆ. ಯೋಧರ ಅದಮ್ಯ ಧೈರ್ಯ, ಹೋರಾಟ ಮತ್ತು ಸರ್ವೋಚ್ಚ ತ್ಯಾಗವು ಪ್ರತಿಯೊಬ್ಬ ಭಾರತೀಯನಿಗೂ ಯಾವಾಗಲೂ ಸ್ಫೂರ್ತಿಯ ಮೂಲವಾಗಿ ಉಳಿಯುತ್ತದೆ. ಜೈ ಹಿಂದ್’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

1971ರ ಡಿಸೆಂಬರ್ 16ರಂದು ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ಭಾರತೀಯ ಸೇನೆಯ ಜಯ ಸಾಧಿಸಿತ್ತು. ಈ ಬಳಿಕ ಬಾಂಗ್ಲಾದೇಶವು ಸ್ವಾತಂತ್ರ್ಯಗೊಂಡಿತ್ತು. ಅದರ ಸ್ಮರಣಾರ್ಥವಾಗಿ ಡಿ.16 ಅನ್ನು ‘ವಿಜಯ ದಿವಸ’ವನ್ನಾಗಿ ಆಚರಿಸಲಾಗುತ್ತಿದೆ.