ADVERTISEMENT

ಮಧ್ಯಪ್ರದೇಶ ವಿಶ್ವಾಸಮತ: ಇಂದು ಸ್ಪೀಕರ್‌ ನಿರ್ಧಾರ?

ಕುತೂಹಲಕರ ಘಟ್ಟಕ್ಕೆ ಮಧ್ಯಪ್ರದೇಶ ವಿದ್ಯಮಾನ

ಪಿಟಿಐ
Published 15 ಮಾರ್ಚ್ 2020, 19:02 IST
Last Updated 15 ಮಾರ್ಚ್ 2020, 19:02 IST
ಕಾಂಗ್ರೆಸ್‌ ಶಾಸಕರು ಜೈಪುರದಿಂದ ಭೋಪಾಲ್‌ಗೆ ಭಾನುವಾರ ಬಂದಿಳಿದ ನಂತರ ಹೋಟೆಲ್‌ನತ್ತ ಹೆಜ್ಜೆ ಹಾಕಿದರು  –ಪಿಟಿಐ ಚಿತ್ರ
ಕಾಂಗ್ರೆಸ್‌ ಶಾಸಕರು ಜೈಪುರದಿಂದ ಭೋಪಾಲ್‌ಗೆ ಭಾನುವಾರ ಬಂದಿಳಿದ ನಂತರ ಹೋಟೆಲ್‌ನತ್ತ ಹೆಜ್ಜೆ ಹಾಕಿದರು –ಪಿಟಿಐ ಚಿತ್ರ   

ಭೋಪಾಲ್‌: ಮಾರ್ಚ್‌ 16ರ ಸೋಮವಾರ ಮಧ್ಯಪ್ರದೇಶ ವಿಧಾನಸಭೆಯ ಬಜೆಟ್‌ ಅಧಿವೇಶನ ಆರಂಭವಾಗಲಿದ್ದು, ಅಂದೇ ವಿಶ್ವಾಸಮತ ಸಾಬೀತುಪಡಿಸುವಂತೆ ಮುಖ್ಯಮಂತ್ರಿ ಕಮಲ್‌ನಾಥ್‌ಗೆ ರಾಜ್ಯಪಾಲ ಲಾಲ್‌ಜಿ ಟಂಡನ್‌ ಸೂಚಿಸಿದ್ದಾರೆ.

ಇನ್ನೊಂದೆಡೆ, ‘ಈ ಸಂಬಂಧ ಸೋಮವಾರವೇ ನನ್ನ ನಿರ್ಧಾರ ಪ್ರಕಟಿಸುತ್ತೇನೆ’ ಎಂದು ಸಭಾಧ್ಯಕ್ಷ ಎನ್‌.ಪಿ.ಪ್ರಜಾಪತಿ ಭಾನುವಾರ ಹೇಳಿದ್ದಾರೆ. ಹೀಗಾಗಿ ಕಮಲ್‌ನಾಥ್‌ ನೇತೃತ್ವದ ಸರ್ಕಾರದ ಅಳಿವು–ಉಳಿವು ಈಗ ಕುತೂಹಲಕರ ಘಟ್ಟ ತಲುಪಿದೆ.

ಜ್ಯೋತಿರಾದಿತ್ಯ ಸಿಂಧಿಯಾ ಅವರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರುತ್ತಿದ್ದಂತೆಯೇ ಅವರಿಗೆ ನಿಷ್ಠರಾದ 22 ಶಾಸಕರೂ ಪಕ್ಷವನ್ನು ತೊರೆದರು. ಈ ಪೈಕಿ ಆರು ಶಾಸಕರ ರಾಜೀನಾಮೆಯನ್ನು ಸಭಾಧ್ಯಕ್ಷ ಪ್ರಜಾಪತಿ ಅಂಗೀಕರಿಸಿದ್ದಾರೆ. ಆದ್ದರಿಂದ ವಿಧಾನಸಭೆಯ ಈಗಿನ ಸಂಖ್ಯಾಬಲ 222ಕ್ಕೆ ಕುಸಿದಿದೆ. ಹೀಗಾಗಿ ಸರಳ ಬಹುಮತಕ್ಕೆ ಅಗತ್ಯವಿರುವ ಶಾಸಕರ ಸಂಖ್ಯೆ 112.

ADVERTISEMENT

ಕಾಂಗ್ರೆಸ್‌ ಶಾಸಕರ ಸಂಖ್ಯೆ 108 ಇದ್ದು, ಮೈತ್ರಿ ಪಕ್ಷಗಳ 7 ಶಾಸಕರ ಬೆಂಬಲದೊಂದಿಗೆ ಸರಳ ಬಹುಮತ ಹೊಂದಿದೆ. ಬಿಜೆಪಿ ಸದಸ್ಯರ ಸಂಖ್ಯೆ 107 ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.