ADVERTISEMENT

ವಿಡಿಯೊ: ಉತ್ತರಾಖಂಡದಲ್ಲಿ ಭೂಕುಸಿತ, ಹೆದ್ದಾರಿ ಸಂಪರ್ಕ ಕಡಿತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಆಗಸ್ಟ್ 2021, 16:49 IST
Last Updated 23 ಆಗಸ್ಟ್ 2021, 16:49 IST
ಚಿತ್ರ ಕೃಪೆ: ಎಎನ್‌ಐ, ಸ್ಕ್ರೀನ್‌ಶಾಟ್
ಚಿತ್ರ ಕೃಪೆ: ಎಎನ್‌ಐ, ಸ್ಕ್ರೀನ್‌ಶಾಟ್   

ಚಂಪಾವತ್: ಉತ್ತರಾಖಂಡದ ಕಣಿವೆಯಲ್ಲಿ ಸೋಮವಾರ ಭೂಕುಸಿತ ಸಂಭವಿಸಿದೆ. ಇದರಿಂದಾಗಿ ತಾನಕ್‌ಪುರ್-ಚಂಪಾವತ್ ರಾಷ್ಟ್ರೀಯ ಹೆದ್ದಾರಿಯ ಸಂಪರ್ಕವು ಸಂಪೂರ್ಣವಾಗಿ ಕಡಿತಗೊಂಡಿದೆ.

ಸುದ್ದಿ ಸಂಸ್ಥೆ ಎಎನ್‌ಐ ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ಚಂಪಾವತ್‌ನ ಸ್ವಾಲಾ ಬಳಿ ಕಣಿವೆಯಿಂದ ಏಕಾಏಕಿ ಬೃಹತ್ ಬಂಡೆಕಲ್ಲುಗಳಿಂದ ಆವೃತ್ತವಾಗಿರುವ ಮಣ್ಣು ಕುಸಿದಿದೆ.

ಅವಶೇಷಗಳನ್ನು ತೆರವುಗೊಳಿಸಲು ಕನಿಷ್ಠ ಎರಡು ದಿನಗಳು ಬೇಕಾಗಬಹುದು. ವಾಹನ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಬದಲಿ ಮಾರ್ಗದಲ್ಲಿ ಸಂಚರಿಸಲು ಅನುವು ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಜಿಲ್ಲಾಧಿಕಾರಿ ವಿನೀತ್ ತೋಮರ್ ತಿಳಿಸಿದ್ದಾರೆ.

ಸ್ಥಳೀಯರು ಭೂ ಕುಸಿತವನ್ನು ಮೊದಲೇ ಅಂದಾಜಿಸಿರುವುದರಿಂದ ಭಾರಿ ಅನಾಹುತ ತಪ್ಪಿದೆ. ಹೆದ್ದಾರಿಯಲ್ಲಿ ಕಾರುಗಳನ್ನು ನಿಲ್ಲಿಸಲಾಗಿತ್ತು. ಕೆಲವೊಂದು ವಾಹನಗಳು ಹಾನಿಗೀಡಾಗಿವೆ.

ಅತ್ಯಂತ ಭಯಾನಕ ಮಣ್ಣುಕುಸಿತ ಉಂಟಾಗಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.