ಹರಿಪಾಲ್/ಸೋನಾರ್ಪುರ: ಮಮತಾ ಬ್ಯಾನರ್ಜಿಯದ್ದು ಪ್ರತಿಬಂಧಕ ಮನಸ್ಥಿತಿ. ಉದ್ಯಮಿಗಳು ಮತ್ತು ಕೈಗಾರಿಕೋದ್ಯಮಿಗಳನ್ನು ಅವರು ಪಶ್ಚಿಮ ಬಂಗಾಳದಿಂದ ಓಡಿಸಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಟಾಟಾ ಮೋಟರ್ಸ್ ಸಿಂಗೂರ್ನಲ್ಲಿ ಆರಂಭಿಸಿದ್ದ ನ್ಯಾನೊ ಕಾರು ಘಟಕದ ವಿರುದ್ಧ ಟಿಎಂಸಿ ನಡೆಸಿದ್ದ ಹೋರಾಟದ ಬಗ್ಗೆ ಮೋದಿ ಅವರು ಇಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ‘ಟಿಎಂಸಿ ಅಂದರೆ ಟಾಕಾ ಮಾರ್ ಕಂಪನಿ (ಲೂಟಿಕೋರ ಕಂಪನಿ). ದೀದಿ ಅವರೇ, ಮೋದಿ ಇಲ್ಲಿದ್ದಾನೆ ನಿಮ್ಮ ಆಟ ನಡೆಯುವುದಿಲ್ಲ ಎಂದು ನಿಮ್ಮ ಪಕ್ಷದ ಗೂಂಡಾಗಳಿಗೆ ಹೇಳಿ ’ ಎಂದು ಮೋದಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.