ADVERTISEMENT

ನಾಲ್ಕೈದು ದಿನಗಳಲ್ಲಿ ಆಸ್ಪತ್ರೆಯಿಂದ ಮನೆಗೆ: ಶ್ರೀಪಾದ್‌ ನಾಯಕ್‌

ಪಿಟಿಐ
Published 19 ಜನವರಿ 2021, 11:09 IST
Last Updated 19 ಜನವರಿ 2021, 11:09 IST
ಶ್ರೀಪಾದ್‌ ನಾಯಕ್‌
ಶ್ರೀಪಾದ್‌ ನಾಯಕ್‌   

ಪಣಜಿ: ಕಾರು ಅಪಘಾತದಲ್ಲಿ ಗಾಯಗೊಂಡು ಗೋವಾದ ಜಿಎಂಸಿಎಚ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೇಂದ್ರ ಸಚಿವ ಶ್ರೀಪಾದ್‌ ನಾಯಕ್‌ 4–5 ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳುವುದಾಗಿ ತಿಳಿಸಿದರು.

ಜನವರಿ 12 ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಬಳಿ ಸಂಭವಿಸಿದ್ದ ಅಪಘಾತದಲ್ಲಿ ಶ್ರೀಪಾದ್ ನಾಯಕ್ ಅವರು ತೀವ್ರವಾಗಿ ಗಾಯಗೊಂಡಿದ್ದರು.

‘ಎಲ್ಲರ ಪ್ರಾರ್ಥನೆ ಮತ್ತು ದೇವರ ಆರ್ಶೀವಾದದ ಫಲವಾಗಿ ನಾನು ಬೇಗ ಗುಣಮುಖನಾಗುತ್ತಿದ್ದೇನೆ. ಹಾಗಾಗಿ ನನ್ನನ್ನು ನೋಡಲು ಜನರು ಆಸ್ಪತ್ರೆಯಲ್ಲಿ ಗುಂಪುಗೂಡಬೇಡಿ. ನಾನು ನಾಲ್ಕರಿಂದ ಐದು ದಿನಗಳೊಳಗೆ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದೇನೆ. ಆ ಬಳಿಕ ಎಲ್ಲರನ್ನು ಭೇಟಿಯಾಗುತ್ತೇನೆ’ ಎಂದು ಶ್ರೀಪಾದ್‌ ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.