ADVERTISEMENT

ಕೇವಲ ಆರ್ಥಿಕ ಕಾರಣಗಳಿಗಾಗಿ ಲಾಕ್‌ಡೌನ್ ಪೂರ್ಣ ಸಡಿಲಿಸುವುದಿಲ್ಲ: ಉದ್ಧವ್ ಠಾಕ್ರೆ

ಪಿಟಿಐ
Published 25 ಜುಲೈ 2020, 7:54 IST
Last Updated 25 ಜುಲೈ 2020, 7:54 IST
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ   

ಮುಂಬೈ: ಆರ್ಥಿಕ ಪ್ರಗತಿಯನ್ನಷ್ಟೇ ದೃಷ್ಟಿಯಲ್ಲಿ ಇರಿಸಿಕೊಂಡು ಲಾಕ್‌ಡೌನ್‌ ಅನ್ನು ಪೂರ್ಣವಾಗಿ ಹಿಂತೆಗೆಯುವುದಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶನಿವಾರ ಸ್ಪಷ್ಟಪಡಿಸಿದ್ದಾರೆ.

ಕೋವಿಡ್-19 ಪರಿಣಾಮ ಗಂಭೀರದ್ದಾಗಿದೆ. ಈ ಹಂತದಲ್ಲಿ ಆರೋಗ್ಯ ಮತ್ತು ಆರ್ಥಿಕತೆಯ ವಿಷಯಗಳನ್ನು ಪರಸ್ಪರ ಹೋಲಿಸುವುದು ಸರಿಯಲ್ಲ ಎಂದು ಶಿವಸೇನೆ ಮುಖವಾಣಿ ‘ಸಾಮ್ನಾ’ಗೆ ನೀಡಿದ ಸಂದರ್ಶನದಲ್ಲಿ ಅವರು ಅಭಿಪ್ರಾಯಪಟ್ಟಿದ್ದಾರೆ.

‘ಲಾಕ್‌ಡೌನ್‌ ಅನ್ನು ಪೂರ್ಣವಾಗಿ ಕೈಬಿಡಲಾಗುವುದು ಎಂದು ನಾನು ಎಲ್ಲಿಯೂ ಹೇಳಿಲ್ಲ. ಹಂತ-ಹಂತವಾಗಿ ನಿರ್ಬಂಧವನ್ನು ಸಡಿಲಿಸಲಾಗುತ್ತಿದೆ. ಒಮ್ಮೆ ಪೂರ್ಣವಾಗಿ ನಿರ್ಬಂಧ ತೆಗೆದರೆ ಮತ್ತೆ ವಿಧಿಸುವುದು ಕಷ್ಟಸಾಧ್ಯ. ಹೀಗಾಗಿ, ನಾನು ಹಂತಹಂತವಾಗಿಯೇ ತೆಗೆಯಲು ಒತ್ತು ನಿಡುತ್ತೇನೆ. ನಾವು ಕೇವಲ ಆರೋಗ್ಯ ಅಥವಾ ಆರ್ಥಿಕತೆ ಎಂದಷ್ಟೇ ನೋಡುವುದು ಸರಿಯಲ್ಲ. ಎರಡರ ನಡುವೆ ಸಮತೋಲನ ಇರಬೇಕು’ ಎಂದು ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.