ADVERTISEMENT

ಮಂಗಳೂರು: ಕಾರಿನ ಗಾಜು ಒಡೆದು, ₹ 15 ಲಕ್ಷ ಕಳವು

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 8:25 IST
Last Updated 13 ಡಿಸೆಂಬರ್ 2019, 8:25 IST
   

ಮಂಗಳೂರು: ಲಾಕ್ ಮಾಡಿ ನಿಲ್ಲಿಸಿದ್ದ ಕಾರಿನ ಹಿಂಬದಿ ಸೀಟಿನ ಕಿಟಕಿ ಗಾಜು ಒಡೆದು, ಕಾರಿನೊಳಗಿಡಲಾಗಿದ್ದ ₹15 ಲಕ್ಷ ಕಳವು ಮಾಡಲಾಗಿದೆ.

ನಗರದ ಚಿಲಂಬಿಯಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು, ಹಣದ ವಾರಸುದಾರರು ಹಣದೊಂದಿಗೆ ಸೌತ್ ಇಂಡಿಯಾ ಬ್ಯಾಂಕ್‌ಗೆಬಂದಿದ್ದರು ಎಂದು ತಿಳಿದು ಬಂದಿದೆ.

ಕೆಎ 03 ಎಂವೈ 4390 ನೋಂದಣಿಯ ಕಪ್ಪು ಬಣ್ಣದ ಕಾರಿನಲ್ಲಿ ಹಣ ಇರಿಸಲಾಗಿತ್ತು. ಹೆಲ್ಮೆಟ್‌ ಧರಿಸಿದ್ದ‌ ಇಬ್ಬರು ಬೈಕಿನಲ್ಲಿ ಬಂದು, ಕಾರಿನ ಗಾಜು ಒಡೆದು ಕಳವು ಮಾಡಿದ್ದಾರೆ. ಈ ಕೃತ್ಯ ಸಿ.ಸಿ ಟಿವಿಯಲ್ಲಿ ಸೆರೆಯಾಗಿದ್ದು, ಬರ್ಕೆ ಪೊಲೀಸರು ಸ್ಥಳಕ್ಕೆ ಭೇಟಿ‌ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.