ADVERTISEMENT

ಕೊಪ್ಪಳ ತಾಲ್ಲೂಕು ಮೆತಗಲ್ ಗ್ರಾಮದಲ್ಲಿ ಒಂದೇ ಕುಟುಂಬ 6 ಜನ ಆತ್ಮಹತ್ಯೆ 

​ಪ್ರಜಾವಾಣಿ ವಾರ್ತೆ
Published 5 ಜನವರಿ 2019, 7:10 IST
Last Updated 5 ಜನವರಿ 2019, 7:10 IST
   

ಕೊಪ್ಪಳ:ಒಂದೇ ಕುಟುಂಬ 6 ಜನ ಆತ್ಮಹತ್ಯೆ ಮಾಡಿಕೊಂಡ ಧಾರುಣಘಟನೆ ತಾಲ್ಲೂಕಿನ ಮೆತಗಲ್ ಗ್ರಾಮದಲ್ಲಿ ನಡೆದಿದೆ.

ಪತ್ನಿ ಮತ್ತು ನಾಲ್ವರು ಮಕ್ಕಳಿಗೆ ವಿಷ ಕುಡಿಸಿದ ಶೇಖರಯ್ಯನೇಣಿಗೆ ಶರಣಾಗಿದ್ದಾರೆ.

ಶೇಖರಯ್ಯ ಬೀಡನಾಳ (42), ಪತ್ನಿ ಜಯಮ್ಮ (39) ಮಕ್ಕಳಾದ ಬಸಮ್ಮ(23), ಗೌರಮ್ಮ(20), ಸಾವಿತ್ರಿ(18), ಪಾರ್ವತಿ(16) ಮೃತಪಟ್ಟವರು.

ADVERTISEMENT
ದಂಪತಿ ಶೇಖರಯ್ಯ ಬೀಡನಾಳ, ಪತ್ನಿ ಜಯಶ್ರೀ, ಕೊನೆ ಮಗಳು ಸಾವಿತ್ರಿ

ಪತ್ನಿ ಮತ್ತು ಮಕ್ಕಳಿಗೆ ವಿಷ ಉಣಿಸಿರುವ, ಶೇಖರಯ್ಯತಾನು ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಶವಗಳನ್ನು ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಸುಕುಮಾರ, ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಕೃಷಿ ಸಚಿವ ಶಿವಶಂಕರ ರೆಡ್ಡಿ, ಶಾಸಕ ಪರಣ್ಣ ಮುನವಳ್ಳಿ ಮನೆಗೆ ಭೇಟಿ ನೀಡಿಸಂಬಂಧಿಕರಿಗೆ ಸಾಂತ್ವಾನ ಹೇಳಿದರು.

ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಆಸ್ಪತ್ರಗೆ ಭೇಟಿ, ಸಾಂತ್ವಾನ ಹೇಳಿದರು.

ಮೃತರ ಸಂಬಂಧಿಗಳ ರೋದನ

ಇದೊಂದು ಧಾರುಣ ಘಟನೆ: ಸಚಿವ

ಕೃಷಿ ಸಚಿವ ಶಿವಶಂಕರೆಡ್ಡಿ ಭೇಟಿ‌ ನೀಡಿ, ಇದೊಂದು ಧಾರುಣ ಘಟನೆ, ಒಂದೇ ಮನೆಯಲ್ಲಿ ಈ ರೀತಿ ಆಗಬಾರದಿತ್ತು. ಸರಕಾರದಿಂದ ಪರಿಹಾರ ಒದಗಿಸಲಾಗುವುದು.ಮೇಲ್ನೋಟಕ್ಕೆ ಸಾಲದ ಹೊರೆ ತಾಳಲಾರದೆ ಹಾಗೂ ಬದುಕು ಸಾಗಿಸಲು ಸಾಧ್ಯವಿಲ್ಲ ಎಂದರಿತು ಸಾವನ್ನಪ್ಪಿರಬಹುದು. ತನಿಖೆಯಿಂದ ನಿಖರ ಕಾರಣ ತಿಳಿಯುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.