ADVERTISEMENT

ಹಕ್ಕು ಚಲಾಯಿಸಿದ ಆನಂದ್‌ ಸಿಂಗ್

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2019, 4:08 IST
Last Updated 23 ಏಪ್ರಿಲ್ 2019, 4:08 IST
   

ಹೊಸಪೇಟೆ: ವಿಜಯನಗರ ಕ್ಷೇತ್ರದಶಾಸಕ ಆನಂದ್ ಸಿಂಗ್ ಅವರು ಮಂಗಳವಾರ ಬೆಳಿಗ್ಗೆ ಇಲ್ಲಿನ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಮತಗಟ್ಟೆ ಸಂಖ್ಯೆ 21ರಲ್ಲಿ ಹಕ್ಕು ಚಲಾಯಿಸಿದರು.

ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದ ಆನಂದ್ ಸಿಂಗ್ ಅವರು,ತಂದೆ ಪೃಥ್ವಿರಾಜ್ ಸಿಂಗ್‌ ಹಾಗೂ ಹೆಂಡತಿ ಲಕ್ಷ್ಮಿ ಸಿಂಗ್ ಜತೆಯಲ್ಲಿ ತೆರಳಿ ಮತ ಚಲಾಯಿಸಿದರು.

ಪ್ರತಿ ವರ್ಷ ಹಕ್ಕು ಚಲಾಯಿಸುವಾಗಮಾಧ್ಯಮದವರಿಗೆ ತಿಳಿಸುತ್ತಿದ್ದ ಅವರು ಈ ಬಾರಿಮಾಧ್ಯಮದವರಿಗೂ ತಿಳಿಸಲಿಲ್ಲ.

ADVERTISEMENT

ಕಂಪ್ಲಿ‌ ಶಾಸಕ ಜೆ.ಎನ್.ಗಣೇಶ್ ಅವರಿಂದ ಹಲ್ಲೆಗೊಳಗಾದ ನಂತರ ಆನಂದ್ ಸಿಂಗ್ ಕ್ಷೇತ್ರ ಹಾಗೂ ಕ್ಷೇತ್ರದ ಜನರಿಂದ ಅಂತರ ಕಾಯ್ದುಕೊಂಡಿದ್ದಾರೆ. ನಗರಕ್ಕೆ ಬಂದರೂ ಸಾರ್ವಜನಿಕರು, ಪಕ್ಷದ ಮುಖಂಡರನ್ನು ಭೇಟಿ ಮಾಡುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.