ಮುಧೋಳ (ಬಾಗಲಕೋಟೆ ಜಿಲ್ಲೆ): ‘ಬಳ್ಳಾರಿ ಯಾವತ್ತಿದ್ದರೂ ಬಿಜೆಪಿಯ ಭದ್ರಕೋಟೆ. ಸಚಿವ ಡಿ.ಕೆ.ಶಿವಕುಮಾರ್ ಅವರ ಆಟ ಅಲ್ಲಿ ನಡೆಯುವುದಿಲ್ಲ. ಅವರದ್ದು ಏನಿದ್ದರೂ ರಾಮನಗರ ಹಾಗೂ ಕನಕಪುರಕ್ಕೆ ಮಾತ್ರ ಸೀಮಿತ’ ಎಂದು ಬಿಜೆಪಿ ಮುಖಂಡ ಜನಾರ್ದನ ರೆಡ್ಡಿ ಟೀಕಿಸಿದರು.
ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶ್ರೀರಾಮಲು ಹಾಗೂ ರೆಡ್ಡಿ ಸಹೋದರರು ಜಿಲ್ಲೆಯಲ್ಲಿ ಪ್ರಭಾವ ಕಳೆದುಕೊಂಡಿಲ್ಲ. ಶ್ರೀರಾಮಲು ಬಳ್ಳಾರಿಯ ಮಣ್ಣಿನ ಮಗ. ಅವರಿಗೆ ಬಳ್ಳಾರಿ ಜನ ಆಶೀರ್ವಾದ ಮಾಡಿದ್ದಾರೆ. ಸಚಿವ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಬಂದು ಪ್ರಚಾರ ಮಾಡಿದರೆ, ಜನ ಆವೇಶದಿಂದ ಬಿಜೆಪಿಗೆ ಹೆಚ್ಚು ವೋಟು ಹಾಕುತ್ತಾರೆ’ ಎಂದರು.
‘ಸಣ್ಣ ಪುಟ್ಟ ಇರುವೆಗಳು ಏನಾದರೂ ಮಾತನಾಡುತ್ತವೆ. ಅವುಗಳ ಮಾತಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ’ ಎಂದು ಬಳ್ಳಾರಿ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಆಂಜನೇಯ ಹೇಳಿಕೆಗೆ ತಿರುಗೇಟು ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.