ಕಲಬುರ್ಗಿ: 12ನೇ ಶತಮಾನದಲ್ಲಿ ಬಸವಣ್ಣನವರು ರೂಪಿಸಿದ್ದ ಅನುಭವ ಮಂಟಪದ ಪ್ರತಿಕೃತಿಯನ್ನು ದೆಹಲಿಯ ಸಂಸತ್ ಭವನದಲ್ಲಿಅಳವಡಿಸಲು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಅನುಮತಿ ನೀಡಿದ್ದಾರೆ.
7ಅಡಿ 9 ಇಂಚು ಎತ್ತರದ ಈ ಕಲಾಕೃತಿಯನ್ನುಇಲ್ಲಿನ ಹಿರಿಯ ಕಲಾವಿದ ಜೆ.ಎಸ್.ಖಂಡೇರಾವ್ ರಚಿಸಿದ್ದಾರೆ.
‘ಅನುಭವ ಮಂಟಪದ ಮಾದರಿಯಲ್ಲಿಯೇ ಸಂಸತ್ತು ರಚನೆಯಾಗಿದೆ. ಹೀಗಾಗಿ, ಸಂಸದರು ಹಾಗೂ ಸಂಸತ್ತಿನ ಭೇಟಿ ನೀಡುವ ಗಣ್ಯರು ಅನುಭವ ಮಂಟಪ ಹೇಗಿತ್ತು ಎಂಬುದನ್ನು ಅರಿತುಕೊಳ್ಳಲು ಈ ಕಲಾಕೃತಿಯನ್ನು ಅಳವಡಿಸಲಾಗುತ್ತಿದೆ.ಬಜೆಟ್ ಅಧಿವೇಶನಕ್ಕೂ ಮೊದಲು ಅಥವಾ ಅಧಿವೇಶನದ ಸಂದರ್ಭ
ದಲ್ಲಿ ಈ ಕಲಾಕೃತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸುವ ನಿರೀಕ್ಷೆ ಇದೆ’ ಎಂಬುದು ಮೂಲಗಳ ವಿವರಣೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.