ADVERTISEMENT

ಅಡಿಕೆ, ಕಾಳು ಮೆಣಸು ಆಮದು ಕಡಿವಾಣಕ್ಕೆ ರಾಜ್ಯಸಭೆಯಲ್ಲಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2022, 16:00 IST
Last Updated 21 ಡಿಸೆಂಬರ್ 2022, 16:00 IST
   

ನವದೆಹಲಿ: ದೇಶಕ್ಕೆ ಅಡಿಕೆ, ಕಾಳು ಮೆಣಸು ಹಾಗೂ ಟೀ ಪದಾರ್ಥಗಳನ್ನು ಆಮದು ಮಾಡುತ್ತಿರುವುದರಿಂದ ಸ್ಥಳೀಯರು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವುಗಳ ಆಮದಿಗೆ ಕಡಿವಾಣ ಹಾಕಬೇಕು ಎಂದು ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್‌ ಒತ್ತಾಯಿಸಿದರು.

ರಾಜ್ಯಸಭೆಯಲ್ಲಿ ಬುಧವಾರ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ‘ಕರ್ನಾಟಕದಲ್ಲಿ ಅಡಿಕೆ ಕೃಷಿಯನ್ನು 20 ಲಕ್ಷ ಕುಟುಂಬಗಳು ಅವಲಂಬಿಸಿವೆ. ಆಮದಿನ ಪರಿಣಾಮದಿಂದ ಅಡಿಕೆ ಬೆಲೆ ಕ್ವಿಂಟಲ್‌ಗೆ ₹39 ಸಾವಿರಕ್ಕೆ ಇಳಿದಿದೆ.ನಮ್ಮ ದೇಶದಲ್ಲಿ ಅಗತ್ಯ ಅಡಿಕೆ ಲಭ್ಯ ಇದ್ದ ಸಂದರ್ಭದಲ್ಲೂ ವಿದೇಶದಿಂದ ಆಮದು ಮಾಡಿಕೊಳ್ಳುತ್ತಿರುವುದು ಸರಿಯಲ್ಲ. ಕಳೆದ ಮೂರು ವರ್ಷಗಳಲ್ಲಿ ಭಾರಿ ಪ್ರವಾಹದಿಂದ ಶೇ 33ರಷ್ಟು ಅಡಿಕೆ ಬೆಳೆ ನಾಶವಾಗಿದೆ’ ಎಂದರು.

‘ದೇಶದಲ್ಲಿ ಅತಿ ಹೆಚ್ಚು ಕಾಳುಮೆಣಸನ್ನು ಕರ್ನಾಟಕದಲ್ಲಿ ಬೆಳೆಯಲಾಗುತ್ತಿದೆ. ಆದರೆ, ವಿಯೆಟ್ನಾಂ, ಶ್ರೀಲಂಕಾದಿಂದ ಅಡಿಕೆ ಆಮದು ಮಾಡಲಾಗುತ್ತಿದೆ. ಇದರಿಂದ ಕಾಳುಮೆಣಸು ಬೆಲೆ ಕೆ.ಜಿ.ಗೆ ₹650ರಿಂದ ₹350ಕ್ಕೆ ಇಳಿದಿದೆ. ಹೀಗಾಗಿ, ಕೇಂದ್ರ ಸರ್ಕಾರವು ವ್ಯಾಪಾರಿ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಪುನರ್ ಪರಿಶೀಲಿಸಿ ನಮ್ಮ ರೈತರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಆಗ್ರಹಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.