ಬೆಂಗಳೂರು: ಬಿಡದಿ ಈಗಲ್ಟನ್ ರೆಸಾರ್ಟ್ನಲ್ಲಿ ವಿಜಯನಗರ (ಹೊಸ ಪೇಟೆ) ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಆರೋಪಿ ಕಂಪ್ಲಿ ಶಾಸಕ ಜೆ.ಎನ್. ಗಣೇಶ್, ನಿರೀಕ್ಷಣಾ ಜಾಮೀನು ಕೋರಿ ನಗ ರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸೋಮವಾರ ಅರ್ಜಿ ಸಲ್ಲಿಸಿದ್ದಾರೆ.
ಘಟನೆ ಬಗ್ಗೆ ಬಿಡದಿ ಠಾಣೆಯಲ್ಲಿ ಎಫ್ಐಆರ್ ದಾಖಲಾ ಗುತ್ತಿದ್ದಂತೆ ತಲೆಮರೆಸಿಕೊಂಡಿ ರುವ ಗಣೇಶ್, ತಿಂಗಳಾದರೂ ಪತ್ತೆಯಾಗಿಲ್ಲ. ಅವರ ಪರವಾಗಿ 16 ಪುಟಗಳ ಅರ್ಜಿ ಸಲ್ಲಿಸಿರುವ ವಕೀಲ ಸಿ.ಎಚ್.ಹನುಮಂತರಾಯ, ಜಾಮೀನಿಗೆ ಕೋರಿದ್ದಾರೆ.
‘ಘಟನೆಯಲ್ಲಿ ನನ್ನ ತಪ್ಪಿಲ್ಲ. ಕುಡಿದ ನಶೆಯಲ್ಲಿ ಜಗಳ ಮಾಡಿದ್ದ ಆನಂದ್ ಸಿಂಗ್, ನನ್ನ ಮೇಲೆಯೇ ಎರಗಿದ್ದರು. ಅವರು ಹಲ್ಲೆ ಮಾಡುವ ಮುನ್ಸೂಚನೆ ಅರಿತು, ನನ್ನನ್ನು ನಾನು ರಕ್ಷಿಸಿಕೊಳ್ಳಲು ಅವರನ್ನು ತಳ್ಳಿದ್ದೆ. ಆಗ ಅವರು ಟೇಬಲ್ ಮೇಲೆ ಬಿದ್ದರು. ಅದರಿಂದ ಮುಖಕ್ಕೆ ಗಾಯವಾಯಿತು’ ಎಂದು ಅರ್ಜಿಯಲ್ಲಿ ಗಣೇಶ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.