ADVERTISEMENT

ಬೆಂಗಳೂರು: ರೈತ ಸಭೆಯಲ್ಲಿ‌ ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ಮಾಡಿದ ವ್ಯಕ್ತಿಗೆ ಥಳಿತ

​ಪ್ರಜಾವಾಣಿ ವಾರ್ತೆ
Published 30 ಮೇ 2022, 8:16 IST
Last Updated 30 ಮೇ 2022, 8:16 IST
   

ಬೆಂಗಳೂರು: ಕೋಡಿಹಳ್ಳಿ‌ ಚಂದ್ರಶೇಖರ ಅವರ ಮೇಲಿನ ಭ್ರಷ್ಟಾಚಾರ ಆರೋಪದ ಬಗ್ಗೆ ಚರ್ಚಿಸಲು ಕರೆಯಲಾಗಿದ್ದ ಸಭೆಯಲ್ಲಿ‌ ಮಾರಾಮಾರಿ ನಡೆದಿದ್ದು, ಮುಖಂಡ ರಾಕೇಶ್ ಟಿಕಾಯತ್‌ ಮೇಲೆ ವ್ಯಕ್ತಿಯೊಬ್ಬ ಮೈಕ್‌ನಿಂದ ಹೊಡೆದು ಮಸಿ‌ ಬಳೆದಿದ್ದಾನೆ.

ರೈತ‌ ಸಂಘದ ಮೂಲ ಹೋರಾಟಗಾರರು ಕರೆದಿದ್ದ ಸಭೆಯಲ್ಲಿ ಹಾಜರಾಗಿದ್ದ ವ್ಯಕ್ತಿಯೊಬ್ಬ, ಮೋದಿ ಹೆಸರು ಕೂಗಿದ್ದ. ಏಕಾಏಕಿ ವೇದಿಕೆಗೆ ನುಗ್ಗಿದ್ದ ವ್ಯಕ್ತಿ, ರಾಕೇಶ್ ಟಿಕಾಯತ್ ಮೇಲೆ ಮೈಕ್ ಕಿತ್ತು ಹೊಡೆದ. ನಂತರ ಎಲ್ಲರೂ ವ್ಯಕ್ತಿಯನ್ನು ಹಿಡಿದು ಥಳಿಸಿದರು. ಕುರ್ಚಿಗಳನ್ನು ಹಿಡಿದು ತೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT