ADVERTISEMENT

ಕಾಂಗ್ರೆಸ್ ನಾಯಕರಿಂದ 1 ಮತಕ್ಕೆ ₹10 ಸಾವಿರ ಹಂಚಿಕೆ: ಬಿಜೆಪಿ ಶಾಸಕ ಬೆನಕೆ ಆರೋಪ

​ಪ್ರಜಾವಾಣಿ ವಾರ್ತೆ
Published 13 ಜೂನ್ 2022, 4:44 IST
Last Updated 13 ಜೂನ್ 2022, 4:44 IST
ಶಾಸಕ ಅನಿಲ ಬೆನಕೆ
ಶಾಸಕ ಅನಿಲ ಬೆನಕೆ   

ಬೆಳಗಾವಿ: 'ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲುಕಾಂಗ್ರೆಸ್ ವಾಮಮಾರ್ಗ ಅನುಸರಿಸುತ್ತಿದೆ. ಶಿಕ್ಷಕರಿಗೆ ಹಣ ಹಂಚುತ್ತಿದೆ' ಎಂದು ಶಾಸಕ ಅನಿಲ ಬೆನಕೆ ಆಪಾದಿಸಿದರು.

ಇಲ್ಲಿನ ವಿಶ್ವೇಶ್ವರಯ್ಯ ನಗರ ಮತಗಟ್ಟೆಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,'ಕಾಂಗ್ರೆಸ್ ನಾಯಕರು ಒಂದು ಮತಕ್ಕೆ ₹10 ಸಾವಿರ ನೀಡುತ್ತಿದ್ದಾರೆ. ಇಂತಹ ಬೆಳವಣಿಗೆ ನಡೆಯಬಾರದು. ಈ‌ ಸಂಬಂಧ ಚುನಾವಣೆ ಆಯೋಗಕ್ಕೆ ದೂರು ಕೊಟ್ಟಿದ್ದೇವೆ' ಎಂದರು.

'ನಾವು ಎಲ್ಲ ಚುನಾವಣೆಗಳನ್ನು ಗಂಭೀರವಾಗಿ ಪರಿಣಿಸಿದ್ದೇವೆ. ಮತದಾರರನ್ನು ಸೆಳೆಯಲು ಬೆಳ್ಳಿ, ವಾಚ್ ಕೊಟ್ಟಿಲ್ಲ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.