ADVERTISEMENT

ನ್ಯಾ. ಸಂದೇಶ್‌ ಏನು ಸಾಧಿಸಲು ಹೊರಟಿದ್ದಾರೆ: ಬಿ.ವಿ. ಆಚಾರ್ಯ ಪ್ರಶ್ನೆ

ಜಾಮೀನು ಅರ್ಜಿ ವಿಚಾರಣೆಯಲ್ಲಿ ಇವೆಲ್ಲಾ ಬೇಕಿತ್ತಾ: ಆಚಾರ್ಯ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2022, 18:12 IST
Last Updated 8 ಜುಲೈ 2022, 18:12 IST
ಬಿ.ವಿ.ಆಚಾರ್ಯ
ಬಿ.ವಿ.ಆಚಾರ್ಯ   

ಬೆಂಗಳೂರು: ‘ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಕಾರ್ಯವೈಖರಿಯನ್ನು ಮುಕ್ತ ನ್ಯಾಯಾಲಯದಲ್ಲಿ ತರಾಟೆಗೆ ತೆಗೆದುಕೊಂಡ ಹೈಕೋರ್ಟ್‌ ನ್ಯಾಯಮೂರ್ತಿ ಎಚ್‌.ಪಿ.ಸಂದೇಶ್‌ ಅವರ ಟೀಕೆ–ಟಿಪ್ಪಣಿ ಎಷ್ಟರ ಮಟ್ಟಿಗೆ ಸೂಕ್ತ ಮತ್ತು ಇಂತಹ ಹೇಳಿಕೆಗಳಿಂದ ಅವರು ಏನನ್ನು ಸಾಧಿಸಲು ಬಯಸಿದ್ದಾರೆ’ ಎಂದು ಮಾಜಿ ಅಡ್ವೊಕೇಟ್‌ ಜನರಲ್‌ ಆದ ಹಿರಿಯ ವಕೀಲ ಬಿ.ವಿ.ಆಚಾರ್ಯಪ್ರಶ್ನಿಸಿದ್ದಾರೆ.

ಸಂದೇಶ್‌ ಅವರನ್ನು ಬೆಂಬಲಿಸಿ ಬೆಂಗಳೂರು ವಕೀಲರ ಸಂಘವು ಪ್ರಕಟಣೆ ಹೊರಡಿಸಿದ್ದಕ್ಕೆ ಪ್ರತಿಯಾಗಿ, ‘ದಕ್ಷ ಲೀಗಲ್‌’ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಆಚಾರ್ಯ, ‘ಸಿಜೆಐಗೆ ಪತ್ರ ಬರೆಯುವ ಮುನ್ನ ಸಂಘವು ಕೆಲವು ಸಂಗತಿಗಳನ್ನು ಮನವರಿಕೆಮಾಡಿಕೊಳ್ಳಿ’ ಎಂದು ಸಂಘಕ್ಕೆ ಅವರು ಸೂಚಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT