ನಿತಿನ್ ಗಡ್ಕರಿ ಅವರಿಗೆ ಗೋವಿಂದ ಕಾರಜೋಳ ಮನವಿ ಸಲ್ಲಿಸಿದರು
ನವದೆಹಲಿ: ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ಧಿ ಮಾಡಬೇಕು ಎಂದು ಒತ್ತಾಯಿಸಿ ಸಂಸದ ಗೋವಿಂದ ಕಾರಜೋಳ ಅವರು ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಮನವಿಯಲ್ಲಿ ಏನಿತ್ತು?
* ಸಿರಾ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 4ರ ಸುಧಾರಣೆ.
* ಚಳ್ಳಕೆರೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 150ಎ ಮಾರ್ಗವನ್ನು ಒಂದು ಬಾರಿ ಸುಧಾರಣೆ.
* ಸಿರಾ ಪಟ್ಟಣಕ್ಕೆ ಬೈಪಾಸ್ ನಿರ್ಮಾಣ.
* ಮೊಳಕಾಲ್ಮೂರು ಪಟ್ಟಣಕ್ಕೆ ಬೈಪಾಸ್ ನಿರ್ಮಾಣ.
*ಸಿರಾ ಬೈಪಾಸ್ನ ಎರಡೂ ಬದಿಗಳಲ್ಲಿ 3.90 ಕಿ.ಮೀ. ಉದ್ದದ 2-ಲೇನ್ ಸರ್ವೀಸ್ ರಸ್ತೆಯ ನಿರ್ಮಾಣ.
* ಹಿರಿಯೂರು ತಾಲ್ಲೂಕಿನ ಪತ್ರೆಹಳ್ಳಿಯಲ್ಲಿ ಅಂಡರ್ಪಾಸ್ ನಿರ್ಮಾಣ.
* ತುಮಕೂರು ಜಿಲ್ಲೆಯ ಚಿಕ್ಕನಹಳ್ಳಿ ಬಳಿ ಹೆದ್ದಾರಿ ದುರಸ್ತಿ.
* ಹೊಳಲ್ಕೆರೆಯಿಂದ ಅನಗೋಡು ವರೆಗೆ ಹೆದ್ದಾರಿ ವಿಸ್ತರಣೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.