ಬೆಂಗಳೂರು:ನಾನು ಈಗಾಗಲೇ ಮುಖ್ಯಮಂತ್ರಿ ಆಗಿದ್ದೇನೆ. ಆ ಕನಸನ್ನುಈಗಲೂ ಕಾಣುತ್ತಿರುವವರು ದಿದ್ದರಾಮಯ್ಯ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಪಕ್ಷದ ಕಚೇರಿಯಲ್ಲಿ ಸೋಮವಾರ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಈ ಹಿಂದಿನ ಗ್ರಾಮ ವಾಸ್ತವ್ಯದ ವೈಫಲ್ಯವನ್ನು ಬಿಂಬಿಸುವ ಕೈಪಿಡಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಹೋಟೆಲ್ನಿಂದ ಆಡಳಿತ, ಮತ್ತೆ ವಾಸ್ತವ್ಯದ ನಾಟಕ’
ಕಳೆದ ಹದಿಮೂರು ತಿಂಗಳಿಂದ ಪಂಚತಾರಾ ಹೋಟೆಲಿನಿಂದ ಆಡಳಿತ ನಡೆಸಿ ಕೋಟ್ಯಂತರ ವೆಚ್ಚ ಮಾಡಿದ್ದೀರಿ. ಈಗ ಮತ್ತೆ ಗ್ರಾಮ ವಾಸ್ತವ್ಯದ ನಾಟಕ ಮಾಡಲಾಗುತ್ತಿದೆ ಎಂದು ಯಡಿಯೂರಪ್ಪ ಟೀಕಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.