ರಾಯಚೂರು: ಮಂತ್ರಾಲಯದಲ್ಲಿ ಸಾರ್ವಜನಿಕರಿಗೆ ರಾಯರ ದರ್ಶನವನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂಧ್ರ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಕೊರೊನಾ ವೈರಸ್ ಪ್ರಭಾವವು ದೇಶದೆಲ್ಲೆಡೆ ತುಂಬಾ ಉಗ್ರವಾಗಿ ಇರುವುದರಿಂದ, ಇದೆಲ್ಲವೂ ಶಾಂತವಾಗುವ ತನಕ ಹಾಗೂ ಆರೋಗ್ಯ ಇಲಾಖೆಯವರು ಸೂಚನೆ ಕೊಡುವವರೆಗೂ ಯಾವುದೇ ತರಹದ ಭಕ್ತರು ಸುತಾರಾಂ ಮಂತ್ರಾಲಯಕ್ಕೆ ಬರುವುದು ಬೇಡ. ಅಲ್ಲಲ್ಲಿಯೇ ರಾಯರ ಸೇವೆ ಮಾಡಿ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕು ಎಂದು ಸಲಹೆ ನೀಡಿದ್ದಾರೆ.
‘ಮಂತ್ರಾಲಯ ಮಠದೊಳಗೆ ಎಂದಿನಂತೆ ಪೂಜಾರಾಧನೆಗಳು ಎಂದಿನಂತೆ ನಡೆಯುತ್ತವೆ. ಆದರೆ, ಅವಕಾಶ, ಪ್ರವೇಶವನ್ನು ಸಂಪೂರ್ಣ ನಿಷೇಧಿಸಿದ್ದೇವೆ’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.