ರಾಯಚೂರು: ‘ಅನಾರೋಗ್ಯದಿಂದ ಬಳಲುತ್ತಿರುವ ಉಡುಪಿ ಪೇಜಾವರ ಮಠದ ಶ್ರೀಗಳು ಶೀಘ್ರ ಗುಣಮುಖರಾಗುವಂತೆ ದೇಶ–ವಿದೇಶಗಳಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠಗಳಲ್ಲಿ ಹೋಮ, ಹವನ, ಭಜನೆ, ಪ್ರಾರ್ಥನೆ ಹಾಗೂ ಪಾರಾಯಣ ಆರಂಭಿಸಲಾಗಿದೆ’ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದರು.
ತಿರುಪತಿ ಶ್ರೀನಿವಾಸ ದೇವರ ದರ್ಶನಕ್ಕೆ ತೆರಳಿರುವ ಅವರು ವಿಡಿಯೋ ದೃಶ್ಯಾವಳಿ ಮೂಲಕ ಮಾಹಿತಿ ನೀಡಿದ್ದು, ‘ಪೇಜಾವರ ಶ್ರೀಗಳ ಹೆಸರಿನಲ್ಲಿ ಭಕ್ತಿ, ಶ್ರದ್ಧೆಯಿಂದ ಸಂಕಲ್ಪ ಮಾಡಬೇಕು. ಹರಿವಾಯು ಸ್ತುತಿ, ವಿಷ್ಣು ಸಹಸ್ರನಾಮ, ರಾಘವೇಂದ್ರಸ್ವಾಮಿಗಳ ಅಷ್ಟೋತ್ತರ, ಬನ್ನಿಸೂಕ್ತ ಹಾಗೂ ಮೃತ್ಯುಂಜಯ ಮಂತ್ರದ ವಿಶೇಷ ಪಾರಾಯಣ ಮಾಡುವಂತೆ ಅವರು ಮಠಗಳ ಶಿಷ್ಯರಿಗೆ ಹಾಗೂ ಸಿಬ್ಬಂದಿಗೆ ಸಂದೇಶ ರವಾನಿಸಲಾಗಿದೆ’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.